ಮೈಸೂರು: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಜೀವನದಲ್ಲಿ ಇದೆಲ್ಲಾ ಸಹಜ. ಆದರೆ ಮೊಟ್ಟೆ ಎಸೆದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದನ್ನು ಹಾದಿರಂಪ ಬೀದಿರಂಪ ಮಾಡಬೇಡಿ. ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ. ಇಷ್ಟಾದ ಮೇಲೂ ಮಡಿಕೇರಿ ಶಕ್ತಿ ಪ್ರದರ್ಶನ ಸರಿಯಲ್ಲ. ನಾಳೆ ಅನಾಹುತ ಸಂಭವಿಸಬಹುದು ಎಂದಿದ್ದಾರೆ.
ನಾಗಪುರದಲ್ಲಿ ಮೊರಾರ್ಜಿ ಅವರಿಗೆ ಚಪ್ಪಲಿ ಎಸೆದಿದ್ದರು. ಇಂದಿರಾಗಾಂಧಿ ಅವರಿಗೆ ಕಲ್ಲೇಟು ಬಿದ್ದಿತ್ತು. ಜಯಲಲಿತಾ ಸಿಎಂ ಆಗಿ ಇಳಿದಾಗ ಸದನದಲ್ಲಿ ಅವಮಾನ ಮಾಡಲಾಗಿತ್ತು. ಸಿದ್ದರಾಮಯ್ಯ ಇದನ್ನು ಮನಸಿಗೆ ಹಚ್ಚಿಕೊಂಡು ಪ್ರತಿ ತೀರಿಸಿಕೊಳ್ಳುವುದು ಸರಿಯಲ್ಲ ಎಂದು ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.