News Karnataka Kannada
Monday, April 29 2024
ಮೈಸೂರು

ಮೈಸೂರು: ಎಚ್.ವಿಶ್ವನಾಥ್ ಹೇಳಿಕೆಗೆ ಅಡ್ಡಂಡ ಸಿ.ಕಾರ್ಯಪ್ಪ ಆಕ್ಷೇಪ

C. Cariappa objects to H. Vishwanath's remarks
Photo Credit : By Author

ಮೈಸೂರು: ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರು ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ರಾಜಕೀಯ ವಾಸನೆ ಇದೆ ಎಂಬ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆಯನ್ನು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಆಕ್ಷೇಪಿಸಿದ್ದಾರೆ.

ಬಿಜೆಪಿ ಪಕ್ಷದಿಂದ ಎಂಎಲ್‌ಸಿ ಆಗಿರುವ ವಿಶ್ವನಾಥ್ ಗೌರವಾನ್ವಿತರು. ಕನ್ನಡ ಮನಸ್ಸು ಉಳ್ಳವರು. ಆದರೆ ಒಳ್ಳೆಯದಕ್ಕೂ ಬಂಡಾಯ, ಕೆಟ್ಟದಕ್ಕೂ ಬಂಡಾಯ. ಬಂಡಾಯ ಅವರ ಸ್ಥಾಯಿಭಾವ. ವಿಶ್ವನಾಥ್ ಅವರು ಡಾ. ಎಸ್.ಎಲ್.ಭೈರಪ್ಪನವರು ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ನೀಡಿರುವ ಹೇಳಿಕೆಗೆ ಬಗ್ಗೆ ಟೀಕಿಸಿರುವುದನ್ನು ಆಕ್ಷೇಪಿಸುತ್ತೇನೆ ಎಂದು ತಿಳಿಸಿದ್ದಾರೆ.

ದೇವನೂರು ಮಹದೇವರವರದ್ದು ಕೂಡ ರಾಜಕೀಯ ಹೇಳಿಕೆ, ನಡೆಗಳು ಇತ್ತೀಚೆಗೆ ಆಗುತ್ತಲೇ ಇದೆ. ಬರಗೂರು ರಾಮಚಂದ್ರಪ್ಪ ಮಾಡಿರುವ ಪರಿಷ್ಕರಣೆ ರಾಜಕೀಯ ಪ್ರೇರಿತವಾಗಿಯೇ ಇತ್ತು. ಎಲ್ಲೆಲ್ಲಿ ಭಾರತೀಯತೆ, ಹಿಂದು, ದೇಶಭಕ್ತಿ, ರಾಷ್ಟ್ರೀಯತೆ ಎಂಬ ಶಬ್ದಗಳು ಕಂಡು ಬರುತ್ತವೆಯೋ ಅಲ್ಲಿ ಎಲ್ಲ ಕತ್ತರಿ ಹಾಕಿದ್ದರು.

ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಮಾತ್ರ ಅಲ್ಲ, ಇತಿಹಾಸವನ್ನೇ ತಿರುಚಿ ಬಿಟ್ಟಿದ್ದಾರೆ. ಇದನ್ನು ವಿಶ್ವನಾಥ್ ಗ್ರಹಿಸದೇ ಅದೇ ಪಠ್ಯಗಳು ಇರಲಿ ಎನ್ನುತ್ತಿದ್ದಾರೆ. ಪಠ್ಯಪುಸ್ತಕ ರಗಳೆ ಕೇವಲ ರಾಜಕೀಯ ಬೇಳೆ ಬೇಯಿಸಲು ವಿರೋಧಿಗಳ ತಂತ್ರವಷ್ಟೇ. ಇದೀಗ ಚುನಾವಣೆ ವರ್ಷವಾದುದರಿಂದ ಈ ಎಲ್ಲ ಕಸರತ್ತು ಒಂದು ವೇಳೆ ಬಿಜೆಪಿ ಸರ್ಕಾರ ಬಂದ ಆರಂಭದಲ್ಲೇ ಪರಿಷ್ಕರಣೆ ಮಾಡಿದ್ದರೆ ಯಾವುದೇ ತಕರಾರು ಇರುತ್ತಿರಲಿಲ್ಲ. ಎಲ್ಲವೂ ಚುನಾವಣೆಯ ಪ್ರಚಾರ ತಂತ್ರ ಅಷ್ಟೇ. ಇದೀಗ ಸರ್ಕಾರ ಪರಿಷ್ಕರಣೆ ತಿದ್ದುಪಡಿ ಮಾಡಿ ಆದೇಶ ನೀಡಿದೆ. ಈಗಾಗಲೇ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಿವೆ. ವಿವಾದಗಳು-ವಾದಗಳು ಎಲ್ಲವೂ ಮುಗಿದಿದೆ. ಇನ್ನಾದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲರೂ ಪಠ್ಯಪುಸ್ತಕಗಳ ಬಗ್ಗೆ ಮೌನವಾಗಿರುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು