News Karnataka Kannada
Saturday, April 27 2024
ಉತ್ತರಕನ್ನಡ

ಕಾರವಾರ: ಗಾಂಜಾ ಸೇವನೆ ವೈದ್ಯಕೀಯ ಪರೀಕ್ಷೆಯಿಂದ ದೃಢ, ಪ್ರಕರಣ ದಾಖಲಿಸಿದ ಪೊಲೀಸರು

Cannabis consumption confirmed by medical examination
Photo Credit : By Author
ಕಾರವಾರ: ಮಾದಕ ವ್ಯಸನಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಆಗಸ್ಟ್ 20 ರಂದು ಶಿರಸಿ ಪೊಲೀಸರು ವಶಕ್ಕೆ ಪಡೆದಿದ್ದ ಐವರು ಆರೋಪಿಗಳು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಈ ಬಗ್ಗೆ  ಎಸ್.ಪಿ. ಕಚೇರಿಯಿಂದ ಹೇಳಿಕೆ ನೀಡಲಾಗಿದೆ. ಶಿರಸಿ ಕಸ್ತೂರಬಾ ನಗರದವರಾದ ಇಸ್ಮಾಯಿಲ್ ಸಲಿಂ ಯಾದವಾಡ್, ಅಬ್ದುಲ್ ಅಜಿಂ ಶೇಖ್, ಮಕ್ಬುಲ್ ಅಹ್ಮದ್ ಮಾಳಾಪುರ, ಹುಬ್ಬಳ್ಳಿ ರಸ್ತೆಯ ನಿವಾಸಿ ಅನುರಾಗ ಜೋಗಳೇಕರ ಹಾಗೂ ಮೂಲತಃ ಯಲ್ಲಾಪುರ ಉದ್ಯಮನಗರದ ಸದ್ಯ ಶಿರಸಿಯ ಕೆನರಾಗಲ್ಲಿಯ ನಿವಾಸಿ ಇರ್ಷಾದ ಅಲ್ಲಾವುದ್ದೀನ್ ಶೇಖ್ ಬಂಧಿತ ಆರೋಪಿಗಳಾಗಿದ್ದಾರೆ.
ಆಗಸ್ಟ್ 20 ರಂದು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಶಿರಸಿ ಪಟ್ಟಣದ ಕಸದಗುಡ್ಡೆಗೆ ಹೋಗುವ ರಸ್ತೆಯಲ್ಲಿ ವಶಕ್ಕೆ ಪಡೆದು ಬಳಿಕ ಅವರ ವೈದ್ಯಕೀಯ ಪರೀಕ್ಷೆಗೆಂದು ಕಾರವಾರದ ಕಿಮ್ಸ್ ಗೆ ರವಾನಿಸಿದ್ದರು. ಭಾನುವಾರ ವರದಿ ಬಂದಿದ್ದು ಐವರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎನ್.ಡಿ.ಒಇ.ಎಸ್. ಕಾಯ್ದೆ 1985 ರ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಎಸ್.ಪಿ. ಡಾ. ಸುಮನ್ ಪನ್ನೇಕರ ನಿರ್ದೇಶನದಲ್ಲಿ ಅಡಿಶನಲ್ ಎಸ್.ಪಿ. ಎಸ್. ಬದರಿನಾಥ ಶಿರಸಿ ಡಿವೈಎಸ್‌ಪಿ ರವಿ ಡಿ. ನಾಯ್ಕ, ಸಿಪಿಐ ಕುಮಾರ ಕೆ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು