ಮೈಸೂರು: ನಂಜನಗೂಡು ತಾಲೂಕಿನ ನುಗು ಪ್ರವಾಸಿ ಮಂದಿರದಲ್ಲಿ ಶಾಸಕ ಬಿ. ಹರ್ಷವರ್ಧನ್ ರೈತರೊಂದಿಗೆ ಸಭೆ ನಡೆಸಿದರು.
ಎಡದಂಡೆ ಬಲದಂಡೆ ಮೇಲ್ದಂಡೆ ಮೂರು ವಿಭಾಗಗಳಲ್ಲೂ ನೀರನ್ನು ಬಿಟ್ಟರೆ ರೈತರು ನಮಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ರೈತರು ಒತ್ತಾಯಿಸಿದರು.
ಈಗ ಇರುವ ನೀರು 106 ಅಡಿ ಇದ್ದು ನೀರನ್ನು ಈಗ ಬಿಟ್ಟರೆ ಮುಂದಿನ ದಿನಗಳಲ್ಲಿ ನಿಮಗೆ ಬೆಳೆ ಪೂರ್ಣ ಪ್ರಮಾಣದಲ್ಲಿ ಬರುವುದಿಲ್ಲ ಹಾಗೂ ಹತ್ತು ಹದಿನೈದು ದಿನಗಳಿಗೆ ಒಮ್ಮೆಯಾದರೂ ನೀರು ಬಿಟ್ಟರೆ ನಮಗೆ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ನಂತರ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ ಈಗ ನೀರು ಬಿಡಲು ಮೇಲಧಿಕಾರಿಗಳ ಸಭೆಯನ್ನು ಕರೆದು ಚರ್ಚೆ ಮಾಡಲಾಗುತ್ತದೆ ನಂತರ ರೈತರಿಗೆ ಅನುಕೂಲ ವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳಾದ ಕಾರ್ಯಪಾಲಕ ಇಂಜಿನಿಯರ್ ಎಂ ಬಿ ರಾಜು, ಎ ಸಿ ಕೃಷ್ಣ ಎ ಇ ಇ, ಅಶೋಕ್ ಕೆ ಸಿ, ದೀಪಕ್, ಮಹೇಶ್, ಚಿಕ್ಕರಂಗನಾಯಕ, ಗಿರೀಶ್ ಸಿ ಕೆ, ಶಿವಣ್ಣ, ಚಂಬುಲಿಂಗ ನಾಯಕ, ಮುಳ್ಳೂರು ರವಿ, ರೈತರು ಹಾಜರಿದ್ದರು.