ಮೈಸೂರು: ನಾನು ವಿದ್ಯಾರ್ಥಿ ಜೀವನದಲ್ಲಿ ವಾರಕ್ಕೆ ಆರು ಸಿನಿಮಾ ವೀಕ್ಷಣೆ ಮಾಡುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು, ಗುಣಮಟ್ಟದ ಉತ್ತಮ ಚಿತ್ರಗಳಿಂದ ಸಮಾಜ, ನಾಡಿಗೆ ಉಪಯುಕ್ತ ಎಂದರು.
ಉತ್ತಮ ಚಿತ್ರಗಳು ಬಂದು ಹೋಗಿವೆ ನಮ್ಮಲ್ಲಿ. ಅನೇಕ ಚಿತ್ರಗಳು ಬಹಳಷ್ಟು ದಿನ ಓಡಿರುವುದನ್ನು ನೋಡಿದ್ದೇವೆ. ಕೆಲವು ಚಿತ್ರಗಳನ್ನ 3-4 ಭಾರಿ ನೋಡಿರುವ ನಿದರ್ಶನ ಇದೆ. ನಾನು ಹೆಚ್ಚು ಸಿನಿಮಾ ನೋಡುತ್ತಿದ್ದೆ ಎಂದರು.
ಮಾನ್ಯತೆ ಪಡೆದ ಆನೇಕ ದೇಶಿ, ವಿದೇಶಿ ಚಿತ್ರಗಳ ಪ್ರದರ್ಶನ ಆಗುತ್ತವೆ. ಸರ್ಕಾರದಿಂದ ಗುಣಮಟ್ಟದ ಚಿತ್ರ ನೀಡಲು ಸಹಾಯ, ಸಹಕಾರ ಇದುವರೆಗೂ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ. ನರಸಿಂಹ ರಾಜು ಅವರ ಜನ್ಮ ದಿನೋತ್ಸವ ಈ ವರ್ಷ ಮಾಡುತ್ತಿದ್ದೇವೆ. ಕನ್ನಡ ಚಿತ್ರರಂಗದ ಅಪರೂಪದ ಹಾಸ್ಯ ನಟ ನರಸಿಂಹ ರಾಜು. ಅವರಿಗೆ ಅವರೇ ಸಾಟಿ ಎಂದರು.