News Karnataka Kannada
Monday, May 13 2024
ಮೈಸೂರು

ಕುದುರೆ ಫಾರಂ ಪರಭಾರೆ ಮಾಡದಂತೆ ವಾಟಾಳ್ ನಾಗರಾಜ್ ಪ್ರತಿಭಟನೆ

ಕುಣಿಗಾಲ್ ಕುದುರೆ ಫಾರಂ ಅನ್ನು ಪರಭಾರೆ ಮಾಡದೆ ಅಲ್ಲಿಯೇ ಉಳಿಸುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್  ನಾಗರಾಜ್ ಪ್ರತಿಭಟನೆ ನಡೆಸಿದರು.
Photo Credit : News Kannada

ಮೈಸೂರು: ಕುಣಿಗಾಲ್ ಕುದುರೆ ಫಾರಂ ಅನ್ನು ಪರಭಾರೆ ಮಾಡದೆ ಅಲ್ಲಿಯೇ ಉಳಿಸುವಂತೆ ಒತ್ತಾಯಿಸಿ ಕನ್ನಡ ಚಳವಳಿ  ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಜೋಡಿ ಕುದುರೆ ಸಾರೋಟಿನಲ್ಲಿ ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕುಣಿಗಲ್ ಫಾರಂಗೆ 400 ವರ್ಷಗಳ ಇತಿಹಾಸ ಇದ್ದು, ಇಲ್ಲಿ ಯಾವುದೇ ಕಾರಣಕ್ಕೂ ನಗರ ನಿರ್ಮಾಣ ಮಾಡಬಾರದು. ಆಂಗ್ಲರು, ಟಿಪ್ಪು  ಸುಲ್ತಾನ್ ಮೈಸೂರು ಅರಸರ ಆಳ್ವಿಕೆ ನೆನಪಿಸುತ್ತದೆ. ಕುಣಿಗಲ್ ಫಾರಂಗೆ ವಿಶ್ವದ ಮಾನ್ಯತೆ ಇದೆ. ಇಂತಹ ಫಾರಂ ಉಳಿಸಿಕೊಳ್ಳುವುದು ಸರಕಾರದ ಆದ್ಯ ಕರ್ತವ್ಯ.  ಕುಣಿಗಲ್ ಕುದುರೆ ಫಾರಂ ಅನ್ನು ವಿಶ್ವದ ಜನ ಬಂದು ನೋಡುವಂತಹ ಸ್ಮಾರಕವಾಗಿ ಮಾಡಬೇಕು ಎಂದು ಒತ್ತಾಯಿಸಿದರು.

1992ರಲ್ಲಿ ಮಲ್ಯನ ಯುಬಿ ಸಂಸ್ಥೆಗೆ ಕೊಟ್ಟಾಗ ನಾನು ವಿರೋಧ ಮಾಡಿದ್ದೆ. ಆದರೆ, ಪರಭಾರೆ ಮಾಡಲು ಭಾರಿ ಕರಾಮತ್ತು ಇದೆ. 100 ಎಕರೆ ಬೆಂಗಳೂರು ಟರ್ಫ್ ಕ್ಲಬ್‌ಗೆ ಹಾಗೂ 321 ಎಕರೆ ಟೌನ್‌ ಷಿಪ್‌ ಗೆ ಬಳಸುವ ಪ್ರಸ್ತಾಪ ಇದೆ. ಈ ಬಗ್ಗೆ ಜ.16ರಂದು  ಬೆಂಗಳೂರಿನಲ್ಲಿ ಕುಣಿಗಲ್ ಕುದುರೆ ಫಾರಂ ಉಳಿಸಿ ಎಂದು ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಸಂಸದ ಅನಂತ್ ಕುಮಾರ್ ಹೆಗಡೆ ಸಿಎಂ ವಿರುದ್ಧ ಏಕವಚನದಲ್ಲಿ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿ, ಹೆಗಡೆಯವರು  ಎಂಪಿ ಆಗಿದ್ದಾರೆ. ನಾನು 65 ವರ್ಷಗಳ ರಾಜಕಾರಣದಲ್ಲಿ  ನಿಜಲಿಂಗಪ್ಪ, ಜೆ.ಎಚ್.ಪಟೇಲ್, ಗುಂಡೂರಾವ್, ಬಂಗಾರಪ್ಪ, ರಾಮಕೃಷ್ಣ ಹೆಗಡೆ ಅವರಂತಹ ರಾಜಕಾರಣಿಗಳನ್ನು ನೋಡಿದ್ದೇನೆ. ಆದರೆ ಯಾವ ರಾಜಕಾರಣಿಯೂ ಇಷ್ಟೊಂದು ಲಘುವಾಗಿ ಮಾತನಾಡಿಲ್ಲ. ವೈಯಕ್ತಿಕ ವಿಚಾರ ಹಾಗೂ ದ್ವೇಷದಿಂದ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ಅಪಮಾನವಲ್ಲ, ರಾಜ್ಯದ ಜನರಿಗೆ ಮಾಡಿದ ಅಪಮಾನ. ಟೀಕೆ ಮಾಡಿ, ಆದರೆ ವೈಯಕ್ತಿಕ ದ್ವೇಷದಿಂದ ಟೀಕೆ ಮಾಡಬಾರದು ಎಂದು ಹೇಳಿದರು.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಿಮಗೆ ಆಹ್ವಾನ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ  ಇದುವರೆಗೂ ಆಹ್ವಾನ ನೀಡಿಲ್ಲ. ರಾಮಮಂದಿರಕ್ಕೆ ನಾನು ಹೋಗುವುದಿಲ್ಲ. ನಾನು ಈಗ ನಿಂತಿರುವುದು ಆಂಜನೇಯ ದೇವಾಲಯದ ಮುಂದೆ. ಆಂಜನೇಯ ರಾಮನ ಭಕ್ತ, ನಾನು ರಾಮಭಕ್ತನ ಮುಂದೆ ಇದ್ದೇನೆ. ಹೀಗಾಗಿ ರಾಮ ಮಂದಿರದ ಬಳಿ ಹೋಗುವ ಅಗತ್ಯ ಇಲ್ಲ. ರಾಮನ ಭಕ್ತಿ ನನ್ನ ಮನಸ್ಸಿನಲ್ಲಿದೆ ಎಂದರು.

ನಾನು ಯಾವ ಜಾತಿಗೂ ಸಂಬಂಧಪಟ್ಟವನಲ್ಲ. ನನ್ನ ಜಾತಿ ಕನ್ನಡ, ನನ್ನ ಧರ್ಮ ಕನ್ನಡ, ನನ್ನ ಭಾಷೆ ಕನ್ನಡ, ನಾನು  ಬದುಕಿರುವುದೇ ಕನ್ನಡಕ್ಕೆ ಎಂದು ತಿಳಿಸಿದರು. ಕನ್ನಡಪರ ಹೋರಾಟಗಾರ ಶಿವಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು