News Karnataka Kannada
Thursday, May 02 2024
ಮೈಸೂರು

ಮೈಸೂರು ದಸರಾ ಗಜಪಡೆಗಳಿಗೀಗ ಭಾರದ ತಾಲೀಮು

Heavy training for Mysuru Dasara elephants
Photo Credit :

ಮೈಸೂರು: ಮೈಸೂರು ದಸರಾ ಜಂಬೂಸವಾರಿಯ ರೂವಾರಿಯಾಗಿರುವ ಗಜಪಡೆಗೆ ತಾಲೀಮು ಶುರುವಾಗಿದೆ. ಈಗಾಗಲೇ ಅಭಿಮನ್ಯು ನೇತೃತ್ವದ ಗಜಪಡೆ ಭಾರದ ತಾಲೀಮು ಆರಂಭಿಸಿದ್ದು, ದಿನದಿಂದ ದಿನಕ್ಕೆ ತಾಲೀಮು ಕಠಿಣವಾಗುತ್ತಾ ಹೋಗಲಿದೆ.

ಗುರುವಾರದಿಂದ ಆರಮಭವಾಗಿರುವ ಭಾರ ಹೊರಿಸುವ ತಾಲೀಮು ಶುರುವಾಗಿದ್ದು, ಅಂಬಾರಿ ಹೊರುವ ಅಭಿಮನ್ಯು ಸುಮಾರು 550 ಕೆಜಿ ತೂಕದ ಮರಳು ಮೂಟೆ ಹೊತ್ತು ಸಾಗುತ್ತಿದ್ದಾನೆ. ದಿನಕ್ಕೆ ಸುಮಾರು 5.5 ಕಿ.ಮೀ. ದೂರ ಸಾಗುತ್ತಿರುವ ಗಜಪಡೆ ಅರಮನೆಯಿಂದ ಬನ್ನಿಮಂಟಪದವರೆಗೆ ತೆರಳಿ ಹಿಂತಿರುಗುತ್ತಿವೆ.

ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಆನೆಯ ಬೆನ್ನಿಗೆ ಗಾದಿ, ನಮ್ದಾವಿಟ್ಟು ಅದರ ಮೇಲೆ ಮರಳಿನ ಮೂಟೆಗಳನ್ನಿಟ್ಟು ತಾಲೀಮು ನಡೆಸಲಾಗುತ್ತಿದೆ. ಇದರ ತೂಕ ಹೇಗಿದೆ ಎಂದರೆ 250 ಕೆ.ಜಿ. ತೋಕದ ಗಾದಿ, ನಮ್ದಾ ಹಾಗೂ 300ಕೆ.ಜಿ ತೂಕದ ಮರಳು ಮೂಟೆಯನ್ನಿಟ್ಟು ಭಾರ ಹೊರುವ ತಾಲೀಮು ನಡೆಯುತ್ತಿದೆ. ದಿನಕ್ಕೆ ಎರಡು ಬಾರಿಯಂತೆ 5 ಕಿ.ಮೀ ನಡೆಸಲಾಗುತ್ತಿದೆ.

ಇರುವ ಒಂಬತ್ತು ಆನೆಗಳ ಪೈಕಿ ಅರ್ಜುನ ಬಿಟ್ಟು ಉಳಿದ ಐದು ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ದಿನಕ್ಕೊಂದರಂತೆ ನಡೆಸಲಾಗುತ್ತದೆ. ಜತೆಗೆ ಭಾರದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಳ ಮಾಡುತ್ತಾ 750 ಕೆಜಿ ಭಾರಕ್ಕೆ ತಂದು ನಿಲ್ಲಿಸಲಾಗುತ್ತದೆ. ಬಳಿಕ ಮರದ ಅಂಬಾರಿಯ ತಾಲೀಮು ನಡೆಯಲಿದೆ. ಪ್ರತಿ ದಿನವೂ ಗಜಪಡೆ ಮೈಸೂರು ನಗರದ ರಾಜಮಾರ್ಗದಲ್ಲಿ ತೆರಳುವ ಮೂಲಕ ತಾಲೀಮು ನಡೆಸುತ್ತಿದ್ದು ಇದರಿಂದ ಮೈಸೂರು ನಗರಕ್ಕೆ ದಸರಾ ಕಳೆ ಬಂದಿರುವುದು ಗೋಚರಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು