ಮೈಸೂರು: ರಾಮಕೃಷ್ಣ ನಗರದ ವಾರ್ಡ್ ನಂ.46 ರಲ್ಲಿ ಕಂದಾಯ ಸಚಿವ ಆರ್.ಆಶೋಕ್ ಮನೆ ಮನೆ ಬಿಜೆಪಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು.
ವಾರ್ಡ್ ನ ಮನೆ ಮನೆ ಗಳಿಗೆ ತೆರಳಿ ಬಿಜೆಪಿಯ ಸರ್ಕಾರದ ಸಾಧನೆಯ ಬಿತ್ತಿಪತ್ರ ಹಂಚಿಕೆ ಮಾಡಿದರು. ಬಳಿಕ ಮಾತನಾಡಿ, ಶುಕ್ರವಾರ ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರದ ಸಾಧನೆ ತಿಳಿಸಲಾಗುತ್ತಿದೆ. ನರೇಂದ್ರ ಮೋದಿಯವರ ಸಾಧನೆ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. ಒಪ್ಪಿಕೊಂಡ ಮನೆಗಳನ್ನು ಬಿಜೆಪಿಯ ಮನೆಗಳೆಂದು ಗುರುತಿಸಿ ಭಿತ್ತಿಪತ್ರ ಅಂಟಿಸಲಾಗಿದೆ ಎಂದರು.
ಮಂಡ್ಯದಲ್ಲಿ ಗೊ ಬ್ಯಾಕ್ ಅಶೋಕ್ ಪೋಸ್ಟರ್ ವಿಚಾರವಾಗಿ ಪ್ರತಿಕ್ರಿಯಿಸಿ, ಅದೆಲ್ಲ ಯಾರೋ ಚಿಲ್ಲರೆಗಳ ಕೆಲಸ. ಅದಕ್ಕೆ ಮಾನ್ಯತೆ ನೀಡುವ ಅಗತ್ಯ ಇಲ್ಲ ಎಂದು ತಿಳಿಸಿದರು. ನಗರಪಾಲಿಕೆ ಸದಸ್ಯ ಕಿರಣ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಚಾಮುಂಡೇಶ್ವರಿ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಇನ್ನಿತರರು ಉಪಸ್ಥಿತರಿದ್ದರು.