ಮೈಸೂರು: ನಂಜನಗೂಡು ನಗರದ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಕ್ಕರಂಗನಾಯಕ ಅಭಿಮಾನಿಗಳ ಬಳಗ ಇಬ್ಜಾಲ ಗ್ರಾಮದ ಪೋಸ್ಟರ್ ನನ್ನು ಕಾರಿನಲ್ಲಿ ಹಿಂಭಾಗದಲ್ಲಿ ಅಳವಡಿಸಿದ್ದ ಪೋಸ್ಟರ್ ನನ್ನು ಟೇಪ್ ಕತ್ತರಿಸುವ ಮೂಲಕ ಶಾಸಕ ಬಿ.ಹರ್ಷವರ್ಧನ್ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು ಚಿಕ್ಕರಂಗನಾಯಕ ಅಭಿಮಾನಿಗಳ ಬಳಗ ಇಂದಿಗೂ ಕೂಡ ಸಮಾಜ ಸೇವೆ ಮಾಡಿಕೊಂಡು ಸಂಕಷ್ಟದಲ್ಲಿರುವ ಜನರಿಗೆ ನಿರಂತರವಾಗಿ ಸೇವೆ ಮಾಡಿಕೊಂಡು ಬರುತ್ತಿದೆ. ಶಿಕ್ಷಣದ ಜೊತೆಗೆ ಎಲ್ಲ ಕ್ಷೇತ್ರಕ್ಕೂ ವ್ಯಾಪಿಸಿಕೊಂಡು ತನ್ನದೇ ಆದ ಕಾರ್ಯ ಚಟುವಟಿಕೆಗಳನ್ನು ನಡೆಸಿ ಜನರ ಮನೆ ಮಾತಾಗಿದೆ. ಇದೇ ರೀತಿ ಚಿಕ್ಕರಂಗನಾಯಕ ಅಭಿಮಾನಿಗಳು ಕಾರ್ಯಕ್ರಮಗಳನ್ನು ನಡೆಸಿ ಇತರೆ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಚಿಕ್ಕ ರಂಗನಾಯಕ , ಅಭಿಮಾನಿ ಬಳಗದ ಪದಾಧಿಕಾರಿಗಳಾದ ಕುಮಾರನಾಯಕ, ರಾಜನಾಯಕ್, ಡೈರಿ ಶಿವು, ಟೈಲರ್ ಸಿದ್ದರಾಜು, ಸೇರಿದಂತೆ ಚಿಕ್ಕರಂಗನಾಯ್ಕ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಭಾಗವಹಿಸಿದರು.