ಚಿಕ್ಕಮಗಳೂರು: ಬಿಜೆಪಿಯ ಶಾಸಕ ಮಾಡಾಲ್ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವು ದನ್ನು ಖಂಡಿಸಿ ಜಿಲ್ಲಾ ಆಮ್ಆದ್ಮಿ ಪಕ್ಷದ ಮುಖಂಡರುಗಳು ನಗರದ ಆಜಾದ್ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಸ್.ಹೇಮಂತ್ಕುಮಾರ್ ಮಾತನಾಡಿ ಬಿಜೆಪಿಯ ಶಾಸಕರ ಮನೆಯಲ್ಲಿ ಸುಮಾರು ಎಂಟು ಕೋಟಿಯಷ್ಟು ಹಣ ವಶಪಡಿಸಿಕೊ ಂಡಿದ್ದು ಈ ಸಂದರ್ಭದಲ್ಲಿ ಅವರು ತಲೆಮರೆಸಿಕೊಂಡು ನಂತರ ಕೆಲವೇ ದಿನಗಳಲ್ಲಿ ನಿರೀಕ್ಷಣಾ ಜಾಮೀನು ನೀಡಿರುವುದು ದುರಾದೃಷ್ಟಕರ. ಭ್ರಷ್ಟಚಾರದಲ್ಲಿ ಮುಳುಗಡೆ ಯಾಗಿ ರುವ ಶಾಸಕ ವಿರೂಪಾಕ್ಷಪ್ಪ ಅವರನ್ನು ಕೂಡಲೇ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರವು ಇಡಿ ಹಾಗೂ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಎಎಪಿ ನಾಯಕರಾದ ಸಿಸೋಡಿಯಾ ಅವರ ವಿರುದ್ಧ ಯಾವುದೇ ಗುರುತರ ಆರೋಪಗಳು ಇಲ್ಲದಿದ್ದರೂ ಅವರ ನ್ನು ಬಂಧಿಸಿದೆ. ಆದರೆ ರಾಜ್ಯದಲ್ಲಿ ಶಾಸಕ ವಿರೂಪಾಕ್ಷಪ್ಪ ಅವರಿಗೆ ಸೇರಿದ ಕೋಟಿಗಟ್ಟಲೇ ಹಣ ತನಿಖೆ ವೇಳೆ ದೊರೆತಿದ್ದರೂ ಜಾಮೀನು ನೀಡಿರು ವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಸೋಡಿಯಾ ಅವರಿಂದ ತೊಂದರೆ ಯಾಗಲಿದೆ ಎಂದು ಅರಿತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ರೀತಿಯ ಸರ್ಕಾರಿ ಸಂಸ್ಥೆಗ ಳನ್ನು ಬಳಸಿಕೊಂಡು ಆಟವಾಡುತ್ತಿದೆ. ಕೂಡಲೇ ಗುರುತರ ಆರೋಪ ಹೊಂದಿರದ ಎಎಪಿ ನಾಯಕರನ್ನು ಬಿಡುಗಡೆ ಗೊಳಿಸಬೇಕು. ಬಿಜೆಪಿಯ ಶಾಸಕ ವಿರೂಪಾಕ್ಷಪ್ಪ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಎಎಪಿ ರಾಜ್ಯ ಜಂಟಿ ಕಾರ್ಯ ದರ್ಶಿ ಡಾ|| ಕೆ.ಸುಂದರಗೌಡ ಮಾತನಾಡಿದರು. ಪ್ರತಿಭಟನೆಯ ನಂತರ ಜಿಲ್ಲಾಧಿ ಕಾರಿ ಕಚೇರಿಗೆ ತೆರಳಿದ ಪಕ್ಷದ ಮುಖಂಡರುಗಳು ಶಾಸಕ ಮಾಡಾ ಲ್ ವಿರೂಪಾಕ್ಷಪ್ಪ ಅವರನ್ನು ಬಂಧಿ ಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡg ಗಳಾದ ಸೈಯದ್ ಜಮೀಲ್ ಅಹ್ಮದ್, ಮೋಹನ್, ಸಲ್ಮಾನ್, ಲಿಂಗಾರಾಧ್ಯ, ರಂಗನಾಥ್, ರಾಜೇಶ್ವರಿ, ಫಿಲೋಮೀನಾ, ಹರ್ಷದ್, ಮತ್ತಿತರರು ಹಾಜರಿದ್ದರು.