News Karnataka Kannada
Thursday, May 02 2024
ಮೈಸೂರು

65 ಕೋಟಿ ರೂ.ಯೋಜನೆಗಳಿಗೆ ಇಂಧನ ಸಚಿವರಿಂದ ಅನುಮೋದನೆ

Sunil Kumar 07082021
Photo Credit :

ಮೈಸೂರು: ನಗರಕ್ಕೆ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿಯಲ್ಲಿ ಮೇಳಾಪುರ ಹಾಗೂ ಕಬಿನಿಯಿಂದ ಹೆಚ್ಚು ನೀರು ತರಲು ಅವಶ್ಯವಿರುವ ವಿದ್ಯುತ್‌ ಲೇನ್‌ ಹಾಗೂ ಉಪವಿಭಾಗ ಘಟಕಗಳನ್ನು ಅಳವಡಿಸುವ 65 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಇಂಧನ ಸಚಿವ ಸುನೀಲ್‌ಕುಮಾರ್‌ ಅನುಮೋದನೆ ನೀಡಿದರು.
ಕಬಿನಿ ನೀರು ಸರಬರಾಜು ಯೋಜನೆಯ ಬಿದರಗೂಡು ಜಾಕ್‌ವೆಲ್‌, ಕೆಂಬಾಳು ಜಲಶುದ್ಧೀಕರಣ ಮತ್ತು ಪಿಂಜರಾಪೋಲು ಮಧ್ಯಂತರ ಯಂತ್ರಗಾರಗಳಿಗೆ ೬೬ ಕೆ.ವಿ.ವಿದ್ಯುತ್‌ ಲೈನ್‌ ಹಾಗೂ 3 ಸಂಖ್ಯೆಯ ಸಬ್‌ ಸ್ಟೇಷನ್‌ಗಳನ್ನು ನಿಮಿಸುವ 30 ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಜತೆಗೆ ಮೇಳಾಪುರ ನೀರು ಸರಬರಾಜು 66/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರದಿಂದ 12.50 ಕಿ.ಮೀ. ದೂರವಿರುವ ರಮ್ಮನಹಳ್ಳಿ ಮತ್ತು ಮೇಳಾಪುರ ಯಂತ್ರಗಾರಗಳಿಗೆ 66.ಕೆ.ವಿ. ವಿದ್ಯುತ್‌ ಲೇನ್‌ ಮತ್ತು 2 ಸಂಖ್ಯೆಯ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸುವ 35 ಕೋಟಿ ರೂ. ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ಸಚಿವ ವಿ.ಸುನೀಲ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸದರಿ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮೂಲಕ ಇನ್ನು 03-04 ತಿಂಗಳಿನಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು ಅವರಿಗೆ ಧನ್ಯವಾದಗಳು ಎಂದು ಅಭಿನಂದನೆ ಸಲ್ಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು