News Karnataka Kannada
Friday, May 03 2024
ಮೈಸೂರು

ಹೆಚ್.ವಿಶ್ವನಾಥ್ ಹೇಳಿಕೆಗೆ ಜೋಗಿ ಮಂಜು ಸ್ಪಷ್ಟನೆ

New Project (4)
Photo Credit :

ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಅಹಲ್ಯಾ ಬಾಯಿ ಹೋಳ್ಕರ್ ಅವರನ್ನು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ  ನಿರ್ಲಕ್ಷಿಸಿದ್ದಾರೆ ಎಂಬ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಾರ್ಟಿಯ ಮೈಸೂರು ಮಹಾ ನಗರದ ಹಿಂದುಳಿದ ವರ್ಗಗಳ ಮೋರ್ಚಾ  ಅಧ್ಯಕ್ಷ  ಜೋಗಿಮಂಜು ಅವರು ಮಾಹಿತಿ ಕೊರತೆಯಿಂದ ಆ ರೀತಿ ಹೇಳಿಕೆ ನೀಡಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.

17 ನೇ ಶತಮಾನದಲ್ಲಿ ಮೋಘಲರಿಂದ ಹಾಳಾಗಿದ್ದ ಕಾಶಿ ಯನ್ನು ಪುನರ್ ನಿರ್ಮಾಣ ಮಾಡಿದ ರಾಜ ಮಾತೆ ಅಹಲ್ಯ ಬಾಯಿ ಹೋಳ್ಕರ್ ರವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇವಾಲಯದ ಕಾರಿಡಾರ್ ನಲ್ಲಿ ಅವರ ಪ್ರತಿಮೆ ಯನ್ನು ಅನಾವರಣ ಮಾಡಿದ್ದಾರೆ.

ಆದರೆ ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ರವರು ಪತ್ರಿಕಾಗೋಷ್ಠಿಯಲ್ಲಿ ಅಹಲ್ಯ ಬಾಯಿ ಹೋಳ್ಕರ್ ರವರನ್ನು ಪ್ರಧಾನಿ ನರೇಂದ್ರ ಮೋದಿ ಯವರು ಮರೆತಿದ್ದಾರೆ  ಹಾಗೂ ಇತಿಹಾಸ ತಿರುಚಿರುತ್ತಾರೆ ಎಂದು ತಿಳಿಸಿದ್ದಾರೆ. ಅವರಿಗೆ  ಸ್ವಲ್ಪ ಮಾಹಿತಿ ಕೊರತೆ ಇರುವುದು ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.

ಕಾಶಿ ದೇವಾಲಯದ ಕಾರಿಡಾರಿನಲ್ಲಿ ಬೃಹತ್ತಾದ ಅಹಲ್ಯ ಬಾಯಿ ಹೋಳ್ಕರ್ ರವರ ಪ್ರತಿಮೆಯನ್ನು ನಿರ್ಮಾಣ ಮಾಡಿಸಿ ಅದರ ಲೋಕಾರ್ಪಣೆ ಮಾಡಿದ್ದು, ಮೋದಿ ಯವರು ಅಹಲ್ಯಾ ಬಾಯಿ ಹೋಳ್ಕರ್ ರವರನ್ನು ಪೂಜ್ಯ ಸ್ಥಾನದಲ್ಲಿ ನೋಡುತ್ತಿದ್ದಾರೆ.

ಕಳೆದ ಹತ್ತು ವರ್ಷದಲ್ಲಿದ್ದ ಕಾಶಿಯಲ್ಲಿ ಗಂಗೆ ಮಲಿನ ವಾಗಿದ್ದಳು ಆದರೆ ಇಂದು ಸಾವಿರಾರು ಕೋಟಿ ವೆಚ್ಚದಲ್ಲಿ ಸ್ವಚ್ಛತೆ ಯನ್ನು ಕಾಣುತ್ತಿದೆ ಹಾಗೆಯೇ ವಾರಣಾಸಿಯಲ್ಲಿ ಇದ್ದ ಇಕ್ಕೆಲ ರಸ್ತೆ ಗಳು ಮತ್ತು ದೇವಾಲಯವು ಸಂಪೂರ್ಣ ಅಭಿವೃದ್ಧಿ ಪಥದಲ್ಲಿರುತ್ತದೆ. ಆದರೆ ವಿಶ್ವನಾಥ ರವರು ಹೇಳಿದಂತೆ ಇತಿಹಾಸ ತಿರುಚುವ ಕೆಲಸ ವನ್ನು ನರೇಂದ್ರ ಮೋದಿ ಯವರು ಮಾಡಿಲ್ಲ. ಅವರು ಹೇಳಿರುವುದನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.

ಇಡೀ ವಿಶ್ವವೇ ವಾರಣಾಸಿ ಯಲ್ಲಿರುವ ಕಾಶಿ ವಿಶ್ವನಾಥ ನ ಕಡೆ ನೋಡುವಾಗ ಇತಿಹಾಸ ತಿರುಚುವ  ಪ್ರಮೇಯ ವೇ ಇಲ್ಲ. ಈ ರೀತಿ ಇಲ್ಲ ಸಲ್ಲದ ವಿಚಾರವನ್ನು ಜನರಿಗೆ ತಿಳಿಸುವುದು ಸರಿಯಲ್ಲ. ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿಯನ್ನು ನೀಡುವಂತೆ ವಿಶ್ವನಾಥ್ ಅವರಿಗೆ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು