News Karnataka Kannada
Sunday, May 05 2024
ಮೈಸೂರು

ಸ್ವಾಮೀಜಿಗಳ ಬಗ್ಗೆ ನನಗೆ ಈಗಲೂ ಗೌರವ ಇದೆ, ಮುಂದೆಯೂ ಇರುತ್ತೆ; ಸಿದ್ದರಾಮಯ್ಯ

Siddaramaih
Photo Credit :

ಮೈಸೂರು : ಹಿಜಾಬ್​ ವಿಚಾರದಲ್ಲಿ ಸ್ವಾಮೀಜಿಗಳನ್ನು ಎಳೆದುತಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಭುಗಿಲೇಳುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್​ ಸಿದ್ದು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ನೀವೆ ಪ್ರಶ್ನೆ ಕೇಳ್ತೀರಿ, ಕಾಂಟ್ರವರ್ಸಿನೂ ನೀವೇ ಮಾಡ್ತೀರಿ ಎಂದು ಸುದ್ದಿಗಾರರಿಗೆ ಹೇಳಿದ ಸಿದ್ದರಾಮಯ್ಯ, ನಮ್ಮ ಹೆಣ್ಣು ಮಕ್ಕಳು ಕೂಡ ದುಪ್ಪಟ್ಟಾ ಹಾಕ್ತಾರೆ ಎಂದಿದ್ದೆ.

ಹಿಜಾಬ್ ಬಗ್ಗೆ ನಾನು ಪ್ರಶ್ನೆಯನ್ನೇ ಮಾಡಿಲ್ಲ. ಹಿಜಾಬ್ ಬೇರೆ, ದುಪ್ಪಟ್ಟಾ ಬೇರೆ. ಬುರ್ಖಾ ಬೇರೆ. ಹಿಂದಿನಲ್ಲಿ ಉರ್ದುನಲ್ಲಿ ದುಪ್ಪಟ್ಟಾ ಅಂತ ಕರೀತಾರೆ ಅದನ್ನೇ ನಾನು ಹೇಳಿದೆ ಸಮರ್ಥಿಸಿಕೊಂಡರು.

ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಈಗಲೂ ಇದೆ, ಮುಂದೆಯೂ ಇರತ್ತೆ. ಯಾವತ್ತೂ ಕೂಡ ಸ್ವಾಮೀಜಿಗಳಿಗೆ ಅಗೌರವವಾಗಿ ನಡೆದುಕೊಂಡಿರುವ ನಿದರ್ಶನ ಇಲ್ಲ. ಅವರ ಜತೆ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಸಮವಸ್ತ್ರದ ಜತೆ ಹೆಣ್ಣುಮಕ್ಕಳಿಗೆ ದುಪ್ಪಟ್ಟಾ ಹಾಕಲು ಅವಕಾಶ ಮಾಡಿ ಕೊಡಿ. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದ್ದೇನೆ ಎನ್ನುತ್ತಾ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.

ನಾನು ಬಿಜೆಪಿಗೆ ಉತ್ತರ ಕೊಡಲ್ಲ. ಹಿಜಾಬ್​ಗೆ ಸ್ವಾಮೀಜಿಗಳ ಶಿರವಸ್ತ್ರವನ್ನ ಹೋಲಿಕೆ ಮಾಡಿಲ್ಲ. ಹಿಜಾಬ್ ಪ್ರಸ್ತಾಪವನ್ನೇ ಮಾಡಿಲ್ಲ. ಸದನದಲ್ಲೂ ದುಪ್ಪಟ್ಟಾ ಹಾಕೋದಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿದ್ದೇನೆ. ನ್ಯಾಯಾಲಯಕ್ಕೂ ಗೌರವ ಕೊಡಬೇಕು. ಸರ್ಕಾರ ಪರೀಕ್ಷೆ ಬರೆಯುವುದಕ್ಕೂ ಅವಕಾಶ ಮಾಡಿಕೊಡಬೇಕು. ಸಮವಸ್ತ್ರ ಹಾಕಿಕೊಳ್ಳಬೇಕು. ದುಪ್ಪಟ್ಟಾ ಹಾಕೋದಕ್ಕೂ ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು