ಮೈಸೂರು : ಹಿಜಾಬ್ ಧರಿಸ್ತಾ ಇರೋದು ಇಂದಿನಿಂದ ಅಲ್ಲ. ಹಿಂದಿನಿಂದಲೂ ಧರಿಸಿಕೊಂಡು ಬರ್ತಾ ಇದ್ದಾರೆ. ಆದ್ರೇ ಕೇಸರಿ ಶಾಲು ಯಾವಾಗಿಂದ ಬಂತು.? ನಾನು ಹಿಜಾಬ್ ಧರಿಸೋದಕ್ಕೆ ಬೆಂಬಲಿಸೋದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗಾರಾಜ್ ತಿಳಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಜಾಬ್ ಹಾಗೂ ಕೇಸರಿ ಶಾಲು ಧರಿಸೋ ವಿವಾದವು, ತೀಟೆ ಜಗಳವಾಗಿದೆ. ಮಕ್ಕಳಿಗೆ ಯಾವುದೇ ರಾಜಕೀಯ ಇಲ್ಲ. ಧರ್ಮ ಇಲ್ಲ. ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು ಎಂದರು.
ಹಿಜಾಬ್ ಧರಿಸೋದಕ್ಕೆ ನನ್ನ ಬೆಂಬಲವಿದೆ. ಹಿಜಾಬ್ ಈಗೇನು ಹೊಸದಾಗಿ ಧರಿಸ್ತಾ ಇಲ್ಲ. ಹಿಂದಿನಿಂದಲೂ ಧರಿಸ್ತಾ ಇದ್ದಾರೆ. ಆದ್ರೇ ಕೇಸರಿ ಶಾಲು ಯಾವಾಗಿಂದ ಬಂತು.? ಎಂಬುದಾಗಿ ಪ್ರಶ್ನಿಸಿದರು.