News Karnataka Kannada
Saturday, May 04 2024
ಮೈಸೂರು

ಸಂತೋಷ್ ಹತ್ಯೆ ಪ್ರಕರಣ, ಸತ್ಯ ಮರೆಮಾಚಲು ಸಾಧ್ಯವೇ ಇಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

Basavaraj Bommai (1)
Photo Credit :

ವಿಜಯನಗರ :  ಸಂತೋಷ್ ಹತ್ಯೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ, ಹೀಗಿರುವಾಗ ನಿರ್ಗಮಿತ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸುವುದು, ಬಿಡುವುದು ತನಿಖಾಧಿಕಾರಿಗಳಿಗೆ ಬಿಟ್ಟಿದ್ದು, ಪೊಲೀಸರ ಕೆಲಸವನ್ನು ನಾವು ಮಾಡೋಕೆ ಆಗೋಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ತನಿಖಾಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದು, ಸತ್ಯ ಮರೆಮಾಚಲು ಸಾಧ್ಯವೇ ಇಲ್ಲ. ತನಿಖೆ‌ವೇಳೆ ಎಲ್ಲವೂ ಬಯಲಾಗಲಿದೆ. ಈ ಹಿಂದೆ ಎಸ್.ಕೆ.ಜಾರ್ಜ್ ಮೇಲೆ ಕೇಳಿಬಂದ ಆರೋಪದಲ್ಲಿ ಅವರ ಹೆಸರು ಸ್ಪಷ್ಟವಾಗಿದ್ದರೂ ಎಫ್ಐಆರ್ ನಲ್ಲಿ ಅವರ ಹೆಸರನ್ನು ಹಾಕಲಿಲ್ಲ.

ಆದರೆ ಬೀಜೆಪಿ ಸರ್ಕಾರ ಪ್ರಾಮಾಣಿಕವಾಗಿದೆ. ಹಾಗಾಗಿ ತನಿಖೆಯ ಮೇಲೆ ಪ್ರಭಾವ ಬೀರಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡುವ, ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ನವರು ಅಂದು ನ್ಯಾಯಾಲಯದ ಆದೇಶದ ಬಳಿಕ ಎಸ್.ಕೆ.ಜಾರ್ಜ್ ಅವರ ಹೆಸರನ್ನು ಹಾಕಿದ್ದರು ಎಂದು ಕೈ‌ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಎಸ್.ಕೆ.ಜಾರ್ಜ್ ಪ್ರಕರಣದಲ್ಲಿ ಅವರನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಪ್ರಕರಣ ಮುಚ್ಚಿಹಾಕುವ ಕಲೆ ಸಿದ್ಧಿಸಿದೆ. ನಾವು ಅಂತಹ ನೀಚ ಕೆಲಸ ಮಾಡೋಲ್ಲ, ಅಂತಹ ಸಂಸ್ಕೃತಿ ನಮ್ಮದಲ್ಲ, ತನಿಖಾಧಿಕಾರಿಗಳು ಅವರ ಕೆಲಸ ಮಾಡಲಿದ್ದಾರೆ, ಅದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು