ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಯೋಜನೆಯ ಕಾಲಮಿತಿಯೊಳಗೆ ಮುಕ್ತಾಯವಾಗುವುದರೊಂದಿಗೆ ಸದ್ಯ ಬೆಂಗಳೂರಿನಿಂದ ನಿಡಘಟ್ಟದವರೆಗಿನ ರಸ್ತೆ ಜೂನ್ ಅಂತ್ಯಕ್ಕೆ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಢಘಟ್ಟದಿಂದ ಮೈಸೂರುವರೆಗೆ ದಸರಾ ಒಳಗೆ ಪೂರ್ಣಗೊಳ್ಳಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 8,532 ಕೋಟಿ ಅನುದಾನ ನೀಡಿದೆ. 700 ಮೀಟರ್ 150 ರಸ್ತೆಗೆ ಸಂಪರ್ಕ ಕಲ್ಪಿಸಲು, ಕೊಲಂಬಿಯಾ ಏಷಿಯಾ ಆಸ್ಪತ್ರೆ ರಸ್ತೆ ಬಳಿ ಫ್ಲೈಓವರ್, ಒಂದು ಕಡೆ ಹೆಲಿಪ್ಯಾಡ್, 2 ಕಡೆಗಳಲ್ಲಿ ರೆಸ್ಟ್ ಏರಿಯಾ, ಹೋಟೆಲ್, ಕರಕುಶಲ ವಸ್ತುಗಳ ಮಾರಾಟ, 16 ಕಡೆಗಳಲ್ಲಿ ಪ್ರವೇಶಕ್ಕೆ ಚಿಂತನೆ ಮಾಡಲಾಗುವುದು.
96 ಬಸ್ ನಿಲ್ದಾಣ ಬರಬೇಕು. 18 ಕಡೆಗಳಲ್ಲಿ ಪಾದಚಾರಿಗಳಿಗೆ ಪುಟ್ ಪಾತ್ ಮಾಡಬೇಕು. ಮೈಸೂರು ಟು ಕುಶಾಲನಗರ ನಾಲ್ಕು ಪಥದ ರಸ್ತೆಗೆ 4 ಸಾವಿರ ಕೋಟಿ ಅನುದಾನ ಅಗತ್ಯವಿದೆ. ಪಶ್ಚಿಮ ವಾಹಿನಿಯಿಂದ ಪಿರಿಯಾಪಟ್ಟಣ, ಪಿರಿಯಾಪಟ್ಟಣ ಗುಡ್ಡೆಹೊಸೂರು, ಗುಡ್ಡೆಹೊಸೂರಿನಿಂದ ಕುಶಾಲನಗರ ತನಕ 120 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.