ಮೈಸೂರು: ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಆಲನಹಳ್ಳಿಯಲ್ಲಿ ನಡೆದಿದೆ.
ಕಿರಣ್ ಮೃತ ದುರ್ದೈವಿ. ಕೊಲೆ ಮಾಡಿದ ಆರೋಪಿ ಪ್ರಮೋದ್ ತಲೆಮರೆಸಿಕೊಂಡಿದ್ದು ಕೃತ್ಯಕ್ಕೆ ಸಹಕರಿಸಿದ ರಾಕೇಶ್ ಹಾಗೂ ಮಹೇಶ್ ರನ್ನ ಆಲನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೃತ ಕಿರಣ್ ತನ್ನ ವಿವಾಹ ವಾರ್ಷಿಕೋತ್ಸವ ದಿನ ಮಧ್ಯಪಾನ ಮಾಡಲು ಕಿರಣ್ ಆಲನಹಳ್ಳಿಯ ಬಾರ್ ಅಂಡ್ ರೆಸ್ಟೋರೆಂಟ್ ಗೆ ತೆರಳಿದ್ದ.
ಈ ವೇಳೆ ಆತನ ಚಿಕ್ಕಪ್ಪನ ಮಗ ಪ್ರಮೋದ್ ಹಾಗೂ ಸ್ನೇಹಿತರಾದ ಕಿರಣ್ ರಾಕೇಶ್ ಮಹೇಶ್ ಕೂಡ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಕಿರಣ್ ಸಹ ಅವರ ಟೇಬಲ್ ಸೇರಿಕೊಂಡ. ಈ ವೇಳೆ ಆಸ್ತಿ ವಿಚಾರ ಪ್ರಸ್ತಾಪವಾಗಿ ಜಗಳ ಶುರುವಾಗಿದೆ.
ಈ ವೇಳೆ ಕಿರಣ್ ಗೆ ಚಾಕುವಿನಿಂದ ಇರಿದ ಪ್ರಮೋದ್ ಪರಾರಿಯಾಗಿದ್ದಾನೆ.ತೀವ್ರ ಗಾಯಗೊಂಡ ಕಿರಣ್ ನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾನೆ. ಆಲನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಕೇಶ್ ಹಾಗೂ ಮಹೇಶ್ ಇಬ್ಬರನ್ನೂ ಬಂಧಿಸಿದ್ದಾರೆ. ಪ್ರಮೋದ್ ಬಂಧನಕ್ಕೆ ಜಾಲ ಬೀಸಿದ್ದಾರೆ.