News Karnataka Kannada
Monday, April 29 2024
ಮೈಸೂರು

ಮೈಸೂರು: ಮಗಳ ಜುಟ್ಟು ಹಿಡಿದು ಎಳೆದಾಡಿದ ತಂದೆ

Marriage
Photo Credit :

ಮೈಸೂರು : ಪಾಲಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾದ ಮಗಳನ್ನು ಹೇಗಾದರೂ ಮರಳಿ ಮನೆಗೆ ಕರೆದೊಯ್ಯಬೇಕೆಂದುಕೊಂಡ ತಂದೆ, ಮಗಳ ಮಾಂಗಲ್ಯ ಸರವನ್ನೇ ಕಿತ್ತು, ಜುಟ್ಟು ಹಿಡಿದು ಎಳೆದಾಡಿದ ಘಟನೆ ನಂಜನಗೂಡು ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ

ಹಲ್ಲರೆ ಗ್ರಾಮದ ಮಹೇಂದ್ರ ಎಂಬಾತನನ್ನು ಸುಮಾರು ಒಂದೂವರೆ ವರ್ಷದಿಂದ ಹರತಲೆ ಗ್ರಾಮದ ಚೈತ್ರಾ ಎಂಬಾಕೆ ಪ್ರೀತಿಸಿಸುತ್ತಿದ್ದಳು. ಆದರೆ, ಇದಕ್ಕೆ ಪಾಲಕರ ವಿರೋಧ ಇತ್ತು. ಅದನ್ನು ಲೆಕ್ಕಿಸದೇ ಡಿಸೆಂಬರ್ 8ರಂದು ಪ್ರೀತಿಸಿದ ಯುವಕನನ್ನು ಚೈತ್ರಾ ಮದುವೆಯಾಗಿದ್ದಳು.

ಮದುವೆಯ ಬಳಿಕ ನೋಂದಣಿಗಾಗಿ ನಂಜನಗೂಡಿನ ಸಬ್ ರಿಜಿಸ್ಟರ್ ಕಚೇರಿಗೆ ನವದಂಪತಿ ಬಂದಿದ್ದರು. ಇದೇ ಸಮಯದಲ್ಲಿ ಆಕೆಯ ತಂದೆಯೂ ಕೂಡ ಅಲ್ಲಿಗೆ ಬಂದಿದ್ದರು. ಮಗಳನ್ನು ಹೇಗಾದರೂ ಮಾಡಿ ಮರಳಿ ಮನೆಗೆ ಕರೆದೊಯ್ಯಬೇಕೆಂಬುದು ಅವರ ಉದ್ದೇಶವಾಗಿತ್ತು. ಮಗಳನ್ನು ಕಂಡ ಕೂಡಲೇ ಆಕೆಯ ಮಾಂಗಲ್ಯ ಸರ ಕಿತ್ತುಹಾಕಿ, ಜುಟ್ಟು ಹಿಡಿದು ಎಳೆದಾಡಿ ಮನೆಗೆ ಕರೆಯೊಯ್ಯಲು ಯತ್ನಿಸಿದ್ದಾರೆ. ಆದರೆ, ತಂದೆಯ ಬಲವಂತಕ್ಕೆ ಮಗಳು ಒಪ್ಪಲಿಲ್ಲ.

ಹೇಗಾದರೂ ಮಾಡಿ ಮಗಳನ್ನು ಕರೆದುಕೊಂಡು ಹೋಗಲೇಬೇಕೆಂಬ ಹಠಕ್ಕೆ ಬಿದ್ದಿದ್ದ ತಂದೆ, ಮಗಳನ್ನು ಬಲವಂತವಾಗಿ ಹಿಡಿದು ಎಳೆದೊಯ್ಯುವಾಗ ಸಾರ್ವಜನಿಕರು ಮಧ್ಯಪ್ರವೇಶಿಸಿದ್ದಾರೆ. ಬಳಿಕ ಅವರ ನೆರವಿನಿಂದ ತಂದೆಯಿಂದ ತಪ್ಪಿಸಿಕೊಂಡ ಚೈತ್ರಾ, ತನ್ನ ಪ್ರಿಯಕರನನ್ನು ಸೇರಿಕೊಂಡಿದ್ದಾಳೆ.

ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕು ಎಂದು ಸಾರ್ವಜನಿಕವಾಗಿಯೇ ಚೈತ್ರಾ ಅವಲತ್ತುಕೊಂಡಿದ್ದು, ಇದನೆಲ್ಲ ನೋಡಿ ತಂದೆ ಬಸವರಾಜ ನಾಯ್ಕ ಅನಿವಾರ್ಯವಾಗಿ ಮನೆಗೆ ಹಿಂದಿರುಗಿದರು. ತಂದೆಯಿಂದ ರಕ್ಷಣೆ ಕೋರಿ ಚೈತ್ರಾ ನಂಜನಗೂಡು ಪೊಲೀಸ್ ಠಾಣೆಗೆ ದೂರು ಸಹ ದಾಖಲಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು