ಮೈಸೂರು: ನಗರದ ಜೆಎಸ್ ಎಸ್ ಅರ್ಬನ್ ಹಾತ್ ನಲ್ಲಿ ಆಯೋಜಿಸಿರುವ ಕರಕುಶಲ ಮೇಳ ಆರಂಭವಾಗಿದ್ದು, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಹೆಬ್ಬಾಳ ರಿಂಗ್ ರಸ್ತೆಯಲ್ಲಿ ನಡೆಯುತ್ತಿರುವ ಅರ್ಬನ್ ಹಾತ್ ಮೇಳ ಈಗಾಗಲೇ ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಅದರಂತೆ ಈ ಬಾರಿಯೂ ಕರಕುಶಲ ಮೇಳ ನಡೆಯುತ್ತಿದ್ದು, ಜನರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.
ಜೆಎಸ್ ಎಸ್ ಮಹಾವಿದ್ಯಾಪೀಠದ ಲೆಕ್ಕ ಪರಿಶೋಧಕ ವಿಭಾಗದ ಕೆ.ಆರ್.ಸತಾನಂ ಮಾತನಾಡಿ ಈಗಾಗಲೇ ಇಲ್ಲಿ ಪ್ರದರ್ಶನ ನಡೆಸುತ್ತಿರುವವರಿಗೆ ಲಾಭದಾಯಕವಾಗಿದ್ದು, ನಗರದ ಜನರ ಸಹಕಾರ ಮುಂದಿನ ದಿನಗಳಲ್ಲಿ ಯೂ ಹೀಗೆ ಇದ್ದರೆ ಉದ್ಯಮ ಮತ್ತಷ್ಟು ಬೆಳೆಯಲಿದೆ ಎಂದರು.
ಕಾರ್ಯಕ್ರಮ ದಲ್ಲಿ ಸಹಾಯಕ ನಿರ್ದೇಶಕರಾದ ಕೆಎಸ್ ಸುನಿಲ್ ಕುಮಾರ್, ಎಚ್ ರವೀಂದ್ರ ಉಪನಿರ್ದೇಶಕರು ಹಣಕಾಸು ವಿಭಾಗ ಜೆಎಸ್ಎಸ್ ಮಹಾವಿದ್ಯಾಪೀಠ, ಯೋಜನಾಧಿಕಾರಿಗಳಾದ ಎಂ ಶಿವಾನಂದಸ್ವಾಮಿ ಹಾಗೂ ಸಂಯೋಜಕ ರಾಕೇಶ್ ರೈ ಇನ್ನಿತರರು ಉಪಸ್ಥಿತರಿದ್ದರು.