News Karnataka Kannada
Friday, May 03 2024
ಮೈಸೂರು

ಮೈಸೂರು: ನಗರದ ಜೆಎಸ್ ಎಸ್ ಅರ್ಬನ್ ಹಾತ್ ನಲ್ಲಿ ಕರಕುಶಲ ಮೇಳ ಆರಂಭ

Mysore
Photo Credit :

ಮೈಸೂರು: ನಗರದ ಜೆಎಸ್ ಎಸ್ ಅರ್ಬನ್ ಹಾತ್ ನಲ್ಲಿ ಆಯೋಜಿಸಿರುವ ಕರಕುಶಲ ಮೇಳ ಆರಂಭವಾಗಿದ್ದು, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಹೆಬ್ಬಾಳ ರಿಂಗ್ ರಸ್ತೆಯಲ್ಲಿ ನಡೆಯುತ್ತಿರುವ ಅರ್ಬನ್ ಹಾತ್ ಮೇಳ ಈಗಾಗಲೇ ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಅದರಂತೆ ಈ ಬಾರಿಯೂ ಕರಕುಶಲ ಮೇಳ ನಡೆಯುತ್ತಿದ್ದು, ಜನರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.

ಜೆಎಸ್ ಎಸ್ ಮಹಾವಿದ್ಯಾಪೀಠದ ಲೆಕ್ಕ ಪರಿಶೋಧಕ ವಿಭಾಗದ ಕೆ.ಆರ್.ಸತಾನಂ ಮಾತನಾಡಿ ಈಗಾಗಲೇ ಇಲ್ಲಿ ಪ್ರದರ್ಶನ ನಡೆಸುತ್ತಿರುವವರಿಗೆ ಲಾಭದಾಯಕವಾಗಿದ್ದು, ನಗರದ ಜನರ ಸಹಕಾರ ಮುಂದಿನ ದಿನಗಳಲ್ಲಿ ಯೂ ಹೀಗೆ ಇದ್ದರೆ ಉದ್ಯಮ  ಮತ್ತಷ್ಟು ಬೆಳೆಯಲಿದೆ ಎಂದರು.

ಕಾರ್ಯಕ್ರಮ ದಲ್ಲಿ ಸಹಾಯಕ ನಿರ್ದೇಶಕರಾದ ಕೆಎಸ್ ಸುನಿಲ್ ಕುಮಾರ್, ಎಚ್ ರವೀಂದ್ರ ಉಪನಿರ್ದೇಶಕರು ಹಣಕಾಸು ವಿಭಾಗ ಜೆಎಸ್ಎಸ್ ಮಹಾವಿದ್ಯಾಪೀಠ, ಯೋಜನಾಧಿಕಾರಿಗಳಾದ ಎಂ ಶಿವಾನಂದಸ್ವಾಮಿ ಹಾಗೂ ಸಂಯೋಜಕ ರಾಕೇಶ್ ರೈ  ಇನ್ನಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು