ಮೈಸೂರು: ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ನಗರದ ಸೀತಾ ವಿಲಾಸ ರಸ್ತೆಯಲ್ಲಿರುವ ಸೀತಾರಾಮ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಶೋದಮ್ಮ (ವಕೀಲರ ಕ್ಷೇತ್ರ ), ಭಾರತಿ (ಸಾಹಿತ್ಯ ಕ್ಷೇತ್ರ ), ಚಾರುಲತಾ ಮೋಹನ್ (ಧಾರ್ಮಿಕ ಕ್ಷೇತ್ರ ), ಸುರಕ್ಷಾ ಅಂಗನವಾಡಿ (ಸಾಮಾಜಿಕ ಕ್ಷೇತ್ರ ), ಮಮತಾ (ವೈದ್ಯಕೀಯ ಕ್ಷೇತ್ರ ), ರೂಪ ನಾಗರಾಜ್ (ಸಾಂಸ್ಕೃತಿಕ ಕ್ಷೇತ್ರ ),ಪುಷ್ಪಲತಾ (ಕರೋಣಾ ವಾರಿಯರ್ ),ಪಾರ್ವತಮ್ಮ ಪೌರ ಕಾರ್ಮಿಕರು (ಸ್ವಚ್ಚತಾ ಕ್ಷೇತ್ರ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಅವರು ಹಿಂದಿನ ಕಾಲದಲ್ಲಿ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದಳು. ಬೆಳಗಿನ ಜಾವ ಕೋಳಿ ಕೂಗುವ ಮುನ್ನವೇ ಎದ್ದು ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಳು. ಆದರೆ ಈಗ ಕಾಲ ಬದಲಾಗಿದೆ. ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾಳೆ. ಕ್ರೀಡೆ, ಸಿನಿಮಾ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮಹಿಳೆ ಪುರುಷನಿಗೆ ಸರಿಸಮಾನವಾಗಿ ನಿಂತಿದ್ದಾಳೆ. ಆದರೂ ಮಹಿಳೆಯ ಮೇಲಿನ ಶೋಷಣೆ ಇನ್ನು ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಳೆಯಾಳ್ವಾರ್ ಸ್ವಾಮೀಜಿ ,ಕಾಂತಿಲಾಲ್ ಜೈನ್ ,ಚಾಮರಾಜ ಕ್ಷೇತ್ರದ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಲಕ್ಷ್ಮಿ, ವಿಘ್ನೇಶ್ವರ ಭಟ್, ಶ್ರೀನಿವಾಸ್, ಚಾಮರಾಜ ಕ್ಷೇತ್ರದ ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಪಾಪಣ್ಣ, ಸುದರ್ಶನ್, ಸನತ್, ಶಿವು, ರಚನ, ಸುಕನ್ಯಾ, ಇನ್ನಿತರರು ಇದ್ದರು.