ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಹಿನಕಲ್ನ ನಾಯಕರ ಬೀದಿಯಲ್ಲಿ ನಡೆದಿದೆ.
ಸಾಕಮ್ಮ (50) ಎಂಬಾಕೆಯೇ ಹಂತಕರ ಮಚ್ಚಿನೇಟಿಗೆ ಬಲಿಯಾದ ದುರ್ದೈವಿ. ಇವರನ್ನು ಮನು, ಗೋವಿಂದನಾಯಕ, ಕಿರಣ್, ಲಕ್ಷ್ಮೀ ಮತ್ತು ಮನೋಜ್ ಕೊಲೆಗೈದಿದ್ದು, ಈ ಪೈಕಿ ಮನೋಜ್ ಪರಾರಿಯಾಗಿದ್ದರೆ, ಉಳಿದವರನ್ನು ಪೊಲೀಸರು ಬಂಧಿಸಿದ್ದಾರೆ.
ಹಿನಕಲ್ ನಿವಾಸಿ ಸಾಕಮ್ಮ ಮತ್ತು ಆರೋಪಿಗಳ ನಡುವೆ ಮನೆ ಕಟ್ಟುವ ವಿಚಾರದಲ್ಲಿ ಜಗಳ ಆರಂಭವಾಗಿತ್ತು. ಅದು ತಾರಕ್ಕೇರಿದಾಗ ಆರೋಪಿಗಳು ಮಚ್ಚಿನಿಂದ ಸಾಕಮ್ಮನ ಮೇಲೆ ಹಲ್ಲೆ ಮಾಡಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ಪರಾರಿಯಾಗಿರುವ ಆರೋಪಿ ಮನೋಜ್ ಗಾಗಿ ಹುಡುಕಾಟ ನಡೆಸಿದ್ದಾರೆ.