ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿoದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಮನವೊಲೈಸಿ, ಬಿಜೆಪಿ ಅಭ್ಯರ್ಥಿಯಾದ ಆರ್.ರಘುಕೌಟಿಲ್ಯರನ್ನು ಗೆಲ್ಲಿಸಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಮಂಗಳವಾರ ಮೈಸೂರು ಜಿಲ್ಲೆಯ ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ತಲಕಾಡು, ಕಲಿಯೂರು, ದೊಡ್ಡಾಪುರ, ಹೊಳೆಸಾಲು, ಬಿ.ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತ್ನ ಸದಸ್ಯರುಗಳು ಹಾಗೂ ಬಿಜೆಪಿ ಪ್ರಮುಖರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬಹಳ ಜನ ವಿದ್ಯಾವಂತರು,ಪದವೀಧರರು ಪಂಚಾಯತ್ ಸದಸ್ಯರಾಗಿರುವುದು ವಿಶೇಷ. ಕೇಂದ್ರ ಸರ್ಕಾರದ ಯೋಜನೆಗಳನ್ನು ಅರಿವು ಮಾಡಿಕೊಟ್ಟು, ಜನ ಸಾಮಾನ್ಯರಿಗೆ ಮುಟ್ಟುವತ್ತ ನಾವೆಲ್ಲರೂ ಕೆಲಸ ನಿರ್ವಹಿಸಬೇಕಿದೆ. ಪಂಚಾಯತ್ ಮಟ್ಟದಲ್ಲಿ ಅಭಿವೃದ್ಧಿ ಮಾಡಿದರೆ, ಸರ್ಕಾರ ಕಟ್ಟ ಕಡೆಯ ವ್ಯಕ್ತಿಗೂ ತಲುಪುತ್ತದೆ. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸೋಣ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಆರ್.ರಘು ಕೌಟಿಲ್ಯರನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸೋಣ. ಪಂಚಾಯತಿ ಸದಸ್ಯರಿಗೆ ಚುನಾವಣೆ ಮಹತ್ವ ಹಾಗೂ ಹಾಗೂ ಗ್ರಾಮ ಪಂಚಾಯತಿ ಸದಸ್ಯರನ್ನು ಭೇಟಿ ಮಾಡಿ, ಮನವೊಲಿಸುವ ಎರಡೂ ಕಾರ್ಯ ಕೂಡಾ ಇವತ್ತಿಂದ ಪ್ರಾರಂಭವಾಗಬೇಕು ಹಾಗೂ ಮೊದಲ ಮತವನ್ನು ಬಿಜೆಪಿ ಅಭ್ಯರ್ಥಿಗೆ ನೀಡಬೇಕು ಎಂದು ತಿಳಿದರು.
ಸಭೆಯಲ್ಲಿ ತಿ ನರಸೀಪುರ ಬಿಜೆಪಿ ಅಧ್ಯಕ್ಷ ಲೋಕೇಶ್, ಮಾಜಿ ವಿಧಾನಪರಿಷತ್ ಸದಸ್ಯ ಸಿ ರಮೇಶ್, ಮಾಜಿ ಶಾಸಕ ಭಾರತೀ ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್, ಸಿದ್ಧಮಲ್ಲಪ್ಪ, ಮರಿಸ್ವಾಮಿ, ಕರವಟ್ಟಿ ಮಹಾದೇವಯ್ಯ ಮತ್ತಿತರರ ಪ್ರಮುಖರು ಹಾಜರಿದ್ದರು.