News Karnataka Kannada
Tuesday, May 07 2024
ಮೈಸೂರು

ಆರ್‌ಎಸ್‌ಎಸ್‌ ಅನ್ನು ತಾಲಿಬಾನ್‌ಗೆ ಹೋಲಿಸಿದನ್ನು ಮತ್ತೆ ಸಮರ್ಥಿಸಿಕೊಂಡ ಆರ್‌.ಧ್ರುವನಾರಾಯಣ್‌

Dhruva Narayan
Photo Credit :

ಮೈಸೂರು: ಆರ್‌ಎಸ್‌ಎಸ್‌ ಸಂಘಟನೆಯನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿರುವ ಹೇಳಿಕೆಗೆ ಈಗಲೂ ಬದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮವನ್ನು ಇಟ್ಟುಕೊಂಡು ಆರ್‌ಎಸ್‌ಎಸ್‌ ಹಾಗೂ ತಾಲಿಬಾನ್‌ ಕೆಲಸ ಮಾಡುತ್ತವೆ. ಹೀಗಾಗಿ, ಈ ಎರಡೂ ಸಂಘಟನೆಗಳಿಗೆ ಹೋಲಿಕೆಗಳಿವೆ. ಅದರ ಆಧಾರದ ಮೇಲೆ ಆರ್‌ಎಸ್‌ಎಸ್‌ನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿದ್ದೇನೆ ಎಂದು ತಿಳಿಸಿದರು.
ಆರ್​ಎಸ್​ಎಸ್ ಮತ್ತು ತಾಲಿಬಾನಿಗಳು ಧರ್ಮವನ್ನು ಪ್ರತಿಪಾದನೆ ಮಾಡುತ್ತಾರೆ. ಜಾತ್ಯತೀತ ನಿಲುವುಗಳಲ್ಲಿ ಬದ್ಧತೆ ಇಲ್ಲ. ಆರ್​​ಎಸ್​ಎಸ್​ನ ಕಾರ್ಯಕರ್ತ ನಾಥೂರಾಮ್​ ಗೋಡ್ಸೆ, ಮಹಾತ್ಮ ಗಾಂಧೀಜಿಯನ್ನು ಗುಂಡಿಕ್ಕಿ ಕೊಲೆ ಮಾಡಿದ. ಆ ಸಮಯದಲ್ಲಿ ಸ್ವಾತಂತ್ರ್ಯ ಬಂದ ನಂತರ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್​​ ಅವರು ಆರ್​ಎಸ್​ಎಸ್​ ಸಂಘಟನೆಯನ್ನು ನಿಷೇಧಿಸಿದ್ದರು ಎಂದರು.
ಆರ್​​ಎಸ್​ಎಸ್​ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇದರ ಜೊತೆಗೆ ಧರ್ಮದ ಪ್ರತಿಪಾದನೆ ಮಾಡುವುದು, ಮನುವಾದದ ಶ್ರೇಣಿಕೃತ ಸಮಾಜವನ್ನು ಪೋಷಣೆ ಮಾಡುವುದು ಆರ್​ಎಸ್​ಎಸ್​ ಅಜೆಂಡವಾಗಿದೆ. ತಾಲಿಬಾನಿಗಳು ಕೂಡ ಧರ್ಮ, ಮಹಿಳೆಯರನ್ನು ದೂರ ಇಟ್ಟಿದ್ದಾರೆ. ಅದರಂತೆ ಆರ್​ಎಸ್​ಎಸ್​ ಕೂಡ ಮಹಿಳೆಯರನ್ನು ದೂರ ಇಟ್ಟಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು