ಮೈಸೂರು, :- ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜಾಗದ ಬಿ ಖರಾಬು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಕುರುಬಾರ ಹಳ್ಳಿ ಸರ್ವೇ ನಂಬರ್ 4ಹಾಗೂ ಆಲನಹಳ್ಳಿ ಸರ್ವೇ ನಂಬರ್ 41 ಹಾಗೂ ಚೌಡಹಳ್ಳಿ ಸರ್ವೆ ನಂಬರ್ 39ಕ್ಕೆ ಒಳಪಡುವ ಎರಡು ಸಾವಿರ ಎಕ್ರೆ ಭೂ ಪ್ರದೇಶ ಬಿ ಖರಾಬು ಎಂದು ನಮೂದಾಗಿತ್ತು. ಈಗ ಈ ಎಲ್ಲಾ ಭೂ ಖಾತೆಗಳಲ್ಲಿ ನಮೂದಾಗಿದ್ದ ಬಿ ಖರಾಬು ರದ್ದುಗೊಳಿಸಿ ಸರ್ಕಾರ ಆದೇಶಿಸಿದೆ.
ಬಿ ಖರಾಬು ರದ್ದು ಮಾಡಲು ಸರ್ಕಾರಕ್ಕೆ ಹೈಕೋರ್ಟ್ ಗಡುವು ನೀಡಿತ್ತು. ಬಿ ಖರಾಬು ರದ್ದಿಗೆ ಸರ್ಕಾರಕ್ಕೆ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ಸಲ್ಲಿಸಿದ್ದು ಬಿ ಖರಾಬು ರದ್ದು ಮಾಡಿ ಸರ್ಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ಚಾಮುಂಡಿಬೆಟ್ಟದ ತಪ್ಪಲಿನ ಭೂಮಿ ರಾಜಮನೆತನದವರ ಖಾಸಗಿ ಆಸ್ತಿ. ರಾಜರಿಂದ ಭೂಮಿ ಖರೀದಿಸಿ ಮಾಲೀಕರ ಹೆಸರಿಗೆ ಖಾತೆ ಮಾಡುವಂತೆ ತೀರ್ಪು ನೀಡಿತ್ತು. ಸರ್ಕಾರ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆಗೆ ಅಂಗೀಕಾರ ಮುನ್ನವೇ ಮೇಲ್ಮನವಿಯನ್ನು ಸುಪ್ರೀಂ ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶ ಪಾಲಿಸದಿರುವುದಕ್ಕೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಭೂಮಾಲೀಕರು ಸಲ್ಲಿಸಿದ್ದರು. ಇಂದು ಹೈಕೋರ್ಟ್ ನಲ್ಲಿ ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆದಿದೆ. ಈ ಅರ್ಜಿ ಪರಿಗಣಿಸಿ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿಯನ್ನು ಹಾಕಿದೆ. ಇದೀಗ ಚಾಮುಂಡಿಬೆಟ್ಟದ ತಪ್ಪಲಿನ ಬಿ ಖರಾಬು ರದ್ದುಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ.