ಚಾಮರಾಜನಗರ: ಜಿಲ್ಲೆಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, ಗುಂಡ್ಲುಪೇಟೆ ತಾಲ್ಲೂಕಿನ ಕೊಡಸೋಗೆ ಬಸವನಕಟ್ಟೆ ಕೆರೆ, ಬೊಮ್ಮಲಾಪುರ ಕೆರೆ, ವಡಯ್ಯನಪುರ ಕೆರೆಗಳು ಭರ್ತಿಯಾದ ಹಿನ್ನಲೆಯಲ್ಲಿ ಶಾಸಕ ಸಿ,ಎಸ್ ನಿರಂಜನ್ ಕುಮಾರ್ ಬಾಗಿನ ಅರ್ಪಿಸಿದ್ದಾರೆ.
ಬೃಹತ್ ರಾಲಿಯಲ್ಲಿ ತೆರಳಿ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಅವರು, ಒಂದು ಕೆರೆಗೆ ನೀರು ತುಂಬಿದರೆ ಅದರ ಸಂತೋಷವೇ ಬೇರೆ. ಕೆರೆಗೆ ನೀರು ತುಂಬಿಸುವುದು ಪುಣ್ಯದ ಕೆಲಸವಾಗಿದೆ. ಕೆರೆಗಳಲ್ಲಿ ನೀರು ಕಾಣದೆ 27 ವರ್ಷಗಳಾಗಿತ್ತು . ಮಳೆ ಬಿದ್ದರಷ್ಟೆ ಕೆರೆಗೆ ನೀರು ಬರುತಿತ್ತು ಎಲೆತೋಟದ ಹಳ್ಳದಲ್ಲಿ ಹಿಂದೆ ಸದಾ ನೀರು ಹರಿಯುತಿತ್ತು. ಆಗ ನೂರು ಅಡಿಗೆ ನೀರು ಬರುತಿತ್ತು. ಆದರೆ ಈಗ ಸಾವಿರ ಅಡಿ ತೋಡಿದರೂ ನೀರು ಬರುತ್ತಿಲ್ಲ, ಬರದ ಪರಿಸ್ಥಿತಿ ನಿರ್ಮಾಣವಾಗಿ ಜೀವನ ಮಾಡುವುದು ಹೇಗೆ ಎಂಬ ಸ್ಥಿತಿಗೆ ರೈತರು ಬಂದಿದ್ದರು. ಹೋರಾಟದ ಫಲವಾಗಿ ಕೆರೆ ತುಂಬಿದೆ. ಈ ನಡುವೆ 12 ಕೋಟಿ ಕರೆಂಟ್ ಬಿಲ್ ನೀಡಿಲ್ಲ ಎಂದು ನೀರು ತುಂಬಿಸುವ ಯೋಜನೆ ಸ್ಥಗಿತಗೊಳಿಸಲಾಗಿತ್ತು, ನಂತರ ಅದನ್ನು ಪಾವತಿ ಮಾಡಿ ಶ್ರಮ ಹಾಕಿದರ ಫಲ ಇಂದು ಸಾರ್ಥಕವಾಗಿದೆ ಎಂದರು.
ಹುತ್ತೂರು ಕೆರೆಗೆ ನೀರು ಬಂದು ಮುಂದಿನ ಕೆರೆಗೆ ಚಾಲನೆ ನೀಡಬೇಕು ಆಗ ಪುಟ್ಟರಂಗಶೆಟ್ಟಿ ಮುಂದಿನ ಕೆರೆಗೆ ಬಿಡಲು ದಿನಾಂಕ ನೀಡುತ್ತಿರಲಿಲ್ಲ, ಶಿವರಾತ್ರಿ ಹಬ್ಬದಂದು ಸಮಯ ನಿಗದಿಯಾದಾಗ ಅವರು ಬರಲಿಲ್ಲ, ಎಲ್ಲರೂ ಚಾಮರಾಜನಗರಕ್ಕೆ ಹೋದೆವು. ಅದಾದ ನಂತರ ರೈತ ಸಂಘದವರು ಹೋರಾಟ ಮಾಡಿದರು. ಲೋಕಸಭೆ ಚುನಾವಣೆ ಸಮೀಪಿಸುತಿದ್ದಂತೆ ಬಿಜೆಪಿಗೆ ಲಾಭವಾಗುತ್ತದೆ ಎಂದು ಕೈ ಬಿಟ್ಟರು. ಸ್ಥಳೀಯ ವಿರೋಧ ಪಕ್ಷದವರ ಕೈವಾಡದಿಂದ ವಿಳಂಬ ಮಾಡಿಸಿದರು. ಎಲ್ಲ ಅಡೆ ತಡೆ ದಾಟಿ ಇಂದು ಕೆರೆಗಳನ್ನು ತುಂಬಿಸಲಾಗಿದೆ ಎಂದು ಹೇಳಿದರು.