News Karnataka Kannada
Thursday, May 09 2024
ಮೈಸೂರು

ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ

Chamraj
Photo Credit :

ಚಾಮರಾಜನಗರ: ಜಿಲ್ಲೆಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, ಗುಂಡ್ಲುಪೇಟೆ ತಾಲ್ಲೂಕಿನ ಕೊಡಸೋಗೆ ಬಸವನಕಟ್ಟೆ ಕೆರೆ, ಬೊಮ್ಮಲಾಪುರ ಕೆರೆ, ವಡಯ್ಯನಪುರ ಕೆರೆಗಳು ಭರ್ತಿಯಾದ ಹಿನ್ನಲೆಯಲ್ಲಿ ಶಾಸಕ ಸಿ,ಎಸ್ ನಿರಂಜನ್ ಕುಮಾರ್ ಬಾಗಿನ ಅರ್ಪಿಸಿದ್ದಾರೆ.

ಬೃಹತ್ ರಾಲಿಯಲ್ಲಿ ತೆರಳಿ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಅವರು, ಒಂದು ಕೆರೆಗೆ ನೀರು ತುಂಬಿದರೆ ಅದರ ಸಂತೋಷವೇ ಬೇರೆ. ಕೆರೆಗೆ ನೀರು ತುಂಬಿಸುವುದು ಪುಣ್ಯದ ಕೆಲಸವಾಗಿದೆ. ಕೆರೆಗಳಲ್ಲಿ ನೀರು ಕಾಣದೆ 27 ವರ್ಷಗಳಾಗಿತ್ತು . ಮಳೆ ಬಿದ್ದರಷ್ಟೆ ಕೆರೆಗೆ ನೀರು ಬರುತಿತ್ತು ಎಲೆತೋಟದ ಹಳ್ಳದಲ್ಲಿ ಹಿಂದೆ ಸದಾ ನೀರು ಹರಿಯುತಿತ್ತು. ಆಗ ನೂರು ಅಡಿಗೆ ನೀರು ಬರುತಿತ್ತು. ಆದರೆ ಈಗ ಸಾವಿರ ಅಡಿ ತೋಡಿದರೂ ನೀರು ಬರುತ್ತಿಲ್ಲ, ಬರದ ಪರಿಸ್ಥಿತಿ ನಿರ್ಮಾಣವಾಗಿ ಜೀವನ ಮಾಡುವುದು ಹೇಗೆ ಎಂಬ ಸ್ಥಿತಿಗೆ ರೈತರು ಬಂದಿದ್ದರು. ಹೋರಾಟದ ಫಲವಾಗಿ ಕೆರೆ ತುಂಬಿದೆ. ಈ ನಡುವೆ 12 ಕೋಟಿ ಕರೆಂಟ್ ಬಿಲ್ ನೀಡಿಲ್ಲ ಎಂದು ನೀರು ತುಂಬಿಸುವ ಯೋಜನೆ ಸ್ಥಗಿತಗೊಳಿಸಲಾಗಿತ್ತು, ನಂತರ ಅದನ್ನು ಪಾವತಿ ಮಾಡಿ ಶ್ರಮ ಹಾಕಿದರ ಫಲ ಇಂದು ಸಾರ್ಥಕವಾಗಿದೆ ಎಂದರು.

ಹುತ್ತೂರು ಕೆರೆಗೆ ನೀರು ಬಂದು ಮುಂದಿನ ಕೆರೆಗೆ ಚಾಲನೆ ನೀಡಬೇಕು ಆಗ ಪುಟ್ಟರಂಗಶೆಟ್ಟಿ ಮುಂದಿನ ಕೆರೆಗೆ ಬಿಡಲು ದಿನಾಂಕ ನೀಡುತ್ತಿರಲಿಲ್ಲ, ಶಿವರಾತ್ರಿ ಹಬ್ಬದಂದು ಸಮಯ ನಿಗದಿಯಾದಾಗ ಅವರು ಬರಲಿಲ್ಲ, ಎಲ್ಲರೂ ಚಾಮರಾಜನಗರಕ್ಕೆ ಹೋದೆವು. ಅದಾದ ನಂತರ ರೈತ ಸಂಘದವರು ಹೋರಾಟ ಮಾಡಿದರು. ಲೋಕಸಭೆ ಚುನಾವಣೆ ಸಮೀಪಿಸುತಿದ್ದಂತೆ ಬಿಜೆಪಿಗೆ ಲಾಭವಾಗುತ್ತದೆ ಎಂದು ಕೈ ಬಿಟ್ಟರು. ಸ್ಥಳೀಯ ವಿರೋಧ ಪಕ್ಷದವರ ಕೈವಾಡದಿಂದ ವಿಳಂಬ ಮಾಡಿಸಿದರು. ಎಲ್ಲ ಅಡೆ ತಡೆ ದಾಟಿ ಇಂದು ಕೆರೆಗಳನ್ನು ತುಂಬಿಸಲಾಗಿದೆ  ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು