News Karnataka Kannada
Sunday, April 28 2024
ಮೈಸೂರು

ಕೌಟುಂಬಿಕ ಕಲಹ: ನಾಲೆಗೆ ಹಾರಿದ ಪತ್ನಿ ರಕ್ಷಿಸಲು ಹೋಗಿ ಸಾವನ್ನಪ್ಪಿದ ಪತಿ

Suicide Jump River
Photo Credit :

ನಂಜನಗೂಡು: ಗಂಡ ಹೆಂಡತಿಯ ಜಗಳ ಆತ್ಮಹತ್ಯೆಯಲ್ಲಿ ಅಂತ್ಯ ಕಂಡ ಘಟನೆ ತಾಲ್ಲೂಕಿನ ಇಮ್ಮಾವುಹುಂಡಿಯಲ್ಲಿ ನಡೆದಿದೆ.
ಗ್ರಾಮದ ಬಸವರಾಜು ಹಾಗೂ ಶೋಭಾ ದಂಪತಿ ಮಧ್ಯೆ ನಡೆಯುತ್ತಿದ್ದ ಜಗಳ ಶುಕ್ರವಾರ ಕೋಪಕ್ಕೆ ತಿರುಗಿದ ಪರಿಣಾಮ ಜೀವನದಲ್ಲಿ ಜುಗುಪ್ಸೆಗೆ ವಳಗಾದ ಪತ್ನಿ ಶೋಭಾ(28) ನೇರವಾಗಿ ರಾಂಪುರ ನಾಲೆಗೆ ಹಾರಿದ್ದು, ಪತ್ನಿ ನಾಲೆಗೆ ಬಿದ್ದಿದ್ದನ್ನು ಕಂಡ ಪತಿ ಬಸವರಾಜು(35) ಸಹ ನಾಲೆಗೆ ಹಾರಿ ಮೃತಪಟ್ಟಿದ್ದಾರೆ.ನಾಲೆಗೆ ಬಿದ್ದಿದ್ದ ಬಸವರಾಜು ಅವರನ್ನು ಕಂಡ ಕೆಲವರು ಅವರನ್ನು ಮೇಲೆತ್ತಿ ಬದುಕಿಸಿದ್ದರು ಎನ್ನಲಾಗಿದ್ದು, ಆದರೆ, ಅವರು ಮತ್ತೆ ನಾಲೆಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಈ ದಂಪತಿಗಳ ೫ ವರ್ಷದ ಗಂಡು ಮಗು ಈಗ ಅನಾಥವಾಗಿದೆ.
ಶೋಭಾ ಅವರ ಸಹೋದರ ಚಂದ್ರ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಭಾನುವಾರ ಸಂಜೆ ಆಲತ್ತೂರು ಬಳಿ ನಾಲೆಯಲ್ಲಿ ಶೋಭಾ ಅವರ ದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಬಸವರಾಜು ಅವರ ಸುಳಿವು ಸೋಮವಾರವೂ ದೊರೆತಿಲ್ಲ. ನಂಜನಗೂಡು ಪೊಲೀಸರು ಈಗ ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ಶಿವಕುಮಾರ್, ಡಿವೈ ಎಸ್‌ಪಿ ಗೋವಿಂದರಾಜು, ನಿರೀಕ್ಷಕ ಶಿವನಂಜಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು