News Karnataka Kannada
Saturday, May 04 2024
ಮೈಸೂರು

ಎಚ್.ಡಿ.ಕೋಟೆ: ಚಿರತೆ ದಾಳಿ, ಗಾಯಾಳು ಆಸ್ಪತ್ರೆಗೆ ದಾಖಲು

Cheetah
Photo Credit :

ಹಂಪಾಪುರ : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕೋಳಗಾಲದ ಚಂದ್ರರಾಜ ಅರಸ್ ಎಂಬುವವರ ಮೇಲೆ ಗುರುವಾರ ಚಿರತೆಯೊಂದು ದಾಳಿ ನಡೆಸಿ ಗಾಯಗೊಳಿಸಿದೆ.

ಚಿರತೆಯನ್ನು ನೋಡಿ ಇವರ ಕೊಟ್ಟಿಗೆಯಲ್ಲಿದ್ದ ಹಸು, ಕರುಗಳು ಜೋರಾಗಿ ಶಬ್ದ ಮಾಡಿವೆ. ಶಬ್ದವನ್ನು ಕೇಳಿದ ಇವರು ಕೊಟ್ಟೆಗೆಗೆ ಬಂದು ನೋಡಿದಾಗ ಚಿರತೆಯು ಇವರ ಮೇಲೆ ಎರಗಿ ತಲೆ, ಮೊಣಕೈ, ಬೆನ್ನುಗಳನ್ನು ಗಾಯಗೊಳಿಸಿದೆ.

ಇವರ ಕೂಗಾಟ ಕೇಳಿ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಚಿರತೆ ಪರಾರಿಯಾಗಿತ್ತು. ಗಾಯಗೊಂಡ ಇವರನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಮಾದಪುರ-ಚಕ್ಕೂರು ಮಧ್ಯ ಇರುವ ಕಪಿಲಾ ನದಿಯಲ್ಲಿ ಎರಡು ಚಿರತೆಗಳು ಈಜಾಡುತ್ತಿರುವುದನ್ನು ನೋಡಿದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ದಾಳಿ ಮಾಡಿರುವ ಚಿರತೆ ಇದೇ ಚಿರತೆಯಾಗಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು