ಮೈಸೂರು: ರಂಗೋಲಿ ಹಾಕುವುದರಿಂದ ವೈಜ್ಞಾನಿಕವಾಗಿ ಆರೋಗ್ಯ ವೃದ್ಧಿಸುತ್ತದೆ ಇದರಿಂದ 8 ಆಸನಗಳ ವ್ಯಾಯಾಮ ಸಿಗಲಿದೆ ಕಣ್ಣುಬುದ್ದಿ ಚುರುಕಾಗುತ್ತದೆ ಎಂದು ಕೆ.ಆರ್.ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ಅವರುತಿಳಿಸಿದರು.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅರಮನೆ ಮುಂಭಾಗದಲ್ಲಿ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಚಿತ್ತಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಪಾರಂಪರಿಕವಾಗಿ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಮನೆ ಮನೆಯಲ್ಲಿ ಇಡುವಂತಹ ರಂಗೋಲಿ ಬಿಡಿಸುವ ಸ್ಪರ್ಧೆ ನಡೆಯುತ್ತಿದೆ. ರಂಗೋಲಿ ಕಲೆಯನ್ನು ವಿದೇಶದಲ್ಲಿ ನಾನು ಕೂಡ ಕಲಿಸುತ್ತೇನೆ ಎಂಬ ಆಸೆ ಇದ್ದವರಿಗೆ ಕೇಂದ್ರ ಸರ್ಕಾರದ ಯೋಜನೆಯಡಿ ವಿದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದರು.
ಒಟ್ಟಾರೆ 96 ಜನ ಮಹಿಳೆಯರು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಈ ಬಾರಿ ರಂಗೋಲಿ ಸ್ಪರ್ಧೆಯನ್ನು ಯೋಗ ಚಿತ್ರ,ಜಂಬೂಸವಾರಿ,ಭಾರತ ಮಾತೆ ಚಿತ್ರ, ದುರ್ಗಾ ದೇವಿ,ನಂದೀಶ್ವರ, ಮಹಿಷಾಶ್ವರ ಚಿತ್ರ, ಆನೆ ಅಂಬಾರಿ, ಗಂಡು ಭೇರುಂಡ, ಇನ್ನೂ ಮುಂತಾದ ಚಿತ್ರಗಳನ್ನು ವರ್ಣರಂಜಿತವಾಗಿ ರಂಗೋಲಿ ಬಿಡಿಸುವ ಮೂಲಕ ಪ್ರತಿಭೆ ಮೆರೆದರು.
ಕಾರ್ಯಕ್ರಮದಲ್ಲಿ ಮಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಉಪಸಮಿತಿಯ ವಿಶೇಷಾಧಿಕಾರಿಗಳು ಹಾಗೂಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.