ಮೈಸೂರು: ಯುಗಾದಿ ಹಬ್ಬದಂದು ಟಿ ನರಸೀಪುರದ ತ್ರಿವೇಣಿ ಸಂಗಮಕ್ಕೆ ಮಂಡ್ಯ ಮೈಸೂರು ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಿಂದ ತ್ರಿವೇಣಿ ಸಂಗಮಕ್ಕೆ ಸಾವಿರಾರು ಜನ ಭಕ್ತರು ಆಗಮಿಸಿ ‘ಪುಣ್ಯಸ್ನಾನ’ ಮಾಡಿ, ಪುನೀತರಾದರು.
ವಿವಿಧ ಗ್ರಾಮದ ಜನರು ದೇವರ ಕೂಟಗಳು, ನಂದಿ ಕಂಬ, ದೇವರ ಕಂಡಾಯಗಳು ಸೇರಿದಂತೆ ನಾನಾ ಪ್ರಕಾರಗಳು ತ್ರಿವೇಣಿ ಸಂಗಮಕ್ಕೆ ಆಗಮಿಸಿ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಿದರು
ತ್ರಿವೇಣಿ ಸಂಗಮ ಸುತ್ತಮುತ್ತಲಿರುವ ಗುಂಜಾನರಸಿಂಹಸ್ವಾಮಿ, ಅಗಸ್ತ್ಯೇಶ್ವರ ಸ್ವಾಮಿ ಸೇರಿದಂತೆ ನಾನಾ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು
ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಹಿಂದುಗಳ ಹೊಸ ವರ್ಷದ ಯುಗಾದಿಯಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ಥಾನ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದರು.