News Karnataka Kannada
Friday, May 03 2024
ಮೈಸೂರು

ಮೈಸೂರು: ವಾತ್ಸಲ್ಯ ಸೇವಾ ಫೌಂಡೇಶನ್‌ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Free Health Check-up Camp organised by Vatsalya Seva Foundation
Photo Credit : By Author

ಮೈಸೂರು: ನಗರದ ಹಿನಕಲ್‌ನಲ್ಲಿರುವ ವಾತ್ಸಲ್ಯ ಸೇವಾ ಫೌಂಡೇಶನ್, ಹಿರಿಯ ನಾಗರೀಕ ಸೇವಾ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

ಅಶೋಕಪುರಂ ಪೊಲೀಸ್ ಠಾಣೆಯ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಆರ್.ನಾಗರಾಜು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಜನ್ಮ ಕೊಟ್ಟ ತಂದೆ ತಾಯಿಗಳನ್ನು ಗೌರವಿಸುವುದು ಪ್ರತಿಯೊಬ್ಬ ಮಕ್ಕಳ ಆದ್ಯ ಕರ್ತವ್ಯ.

ಮಾತಾ ಪಿತೃಗಳೇ ದೇವರು. ಅವರು ಜನ್ಮ ನೀಡದಿದ್ದರೆ ನಾವು ಭೂಮಿ ಮೇಲೆ ಹುಟ್ಟುತ್ತಿರಲಿಲ್ಲ. ಜನ್ಮ ನೀಡಿದ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು. ವೃದ್ದಾಪ್ಯ ಜೀವನದಲ್ಲಿ ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಆರೈಕೆ ಮಾಡುವುದು ಬಹಳ ಮುಖ್ಯ. ಅವರನ್ನು ಸಂತೋಷದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸ್ವಾರ್ಥ ಮನೋಭಾವ ಜಾಸ್ತಿಯಾಗಿ ತಂದೆ ತಾಯಿಗಳನ್ನು ಹಾಗೂ ಹಿರಿಯರನ್ನು ವೃದ್ಧಾಶ್ರಮಗಳಿಗೆ ತಳ್ಳುತ್ತಿರುವುದು ವಿಷಾದದ ಸಂಗತಿ. ಈ ಸಂಸ್ಕೃತಿ ನಿಲ್ಲಬೇಕು. ಎಲ್ಲರೂ ಒಟ್ಟಾಗಿ ಸೇವಾ ಮನೋಭಾವದಿಂದ ಸ್ವಕುಟುಂಬ ಪರಿವಾರವಾಗಿ ಬದುಕಬೇಕೆಂದು ತಿಳಿಸಿದರು.

ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡಿ, ಆರೋಗ್ಯವೇ ಮಹಾಭಾಗ್ಯ. ಇಂದು ರಾಸಾಯನಿಕಯುಕ್ತ ಆಹಾರಗಳನ್ನು ಸೇವಿಸಿ  ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದು ನಿಲ್ಲಬೇಕು. ವಿಷಪೂರಿತವಲ್ಲದ, ಸಹಜ ಕೃಷಿಯಿಂದ ತಯಾರಿಸಿದ ಸಾವಯಕ ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು. ಜಂಕ್ ಫುಡ್ (ಪೌಷ್ಠಿಕರಹಿತ ಆಹಾರ)  ತಿನ್ನುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾತ್ಸಲ್ಯ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎ.ಸಿ.ರವಿಕುಮಾರ್ ಹಿರಿಯ ಜೀವಿಗಳಿಗೆ ಉಚಿತ ಔಷಧಿ ಸಲಕರಣೆಗಳನ್ನು ವಿತರಿಸಿದರು. ವಕೀಲ ಸತೀಶ್, ಸಮಾಜ ಸೇವಕ ಸಚಿನ್ ದೀಕ್ಷಿತ್  ಹಾಗೂ ವಾತ್ಸಲ್ಯ ಸೇವಾ ಪೌಂಡೇಶನ್ ಹಿರಿಯ ಜೀವಿಗಳು ಭಾಗವಹಿಸಿದ್ದರು. 63ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು