ಮೈಸೂರು: ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರ ಹುಟ್ಟು ಹಬ್ಬ ಹಾಗೂ 75ನೆಯ ಸ್ವಾತಂತ್ರ್ಯ ಅಮೃತೋತ್ಸವದ ಅಂಗವಾಗಿ ಆಪ್ ಮೈಸೂರು ಚಾಮರಾಜ ಕ್ಷೇತ್ರದ ತಂಡದ ವತಿಯಿಂದ ತ್ರಿವರ್ಣ ಪಾದಯಾತ್ರೆ ಹಾಗೂ ಬೈಕ್ ರ್ಯಾಲಿ ಏರ್ಪಡಿಸಲಾಗಿತ್ತು.
ಯಾತ್ರೆಯ ನೇತೃತ್ವ ಆಪ್ ಜಿಲ್ಲಾಧ್ಯಕ್ಷೆ ಶ್ರೀಮತಿ ಮಾಲವಿಕ ಗುಬ್ಬಿವಾಣಿ ವಹಿಸಿದ್ದರು. ಪಕ್ಷದ ನಾಯಕರಾದ ಉಷಾ ಸಂಪತ್ಕುಮಾರ್,ಶಿವಕುಮಾರ್, ಧರ್ಮಶ್ರೀ, ಕಿರಣ್ ಕಲ್ಯಾಣಿ, ರಂಗಯ್ಯ, ಮಹಾದೇವಿ ಮತ್ತು ಕಾರ್ಯಕರ್ತರಾದ ಹರ್ಷ, ಇರ್ಫಾನ್ ರಝಾಕ್, ಇರ್ಫಾನ್ ಬೇಗ್, ದೀಪಕ್, ರವಿಚಂದ್ರ, ಶೋಏಬ್, ರಾಜಮ್ಮ, ಐಶ್ವರ್ಯ, ತಮ್ಮಯ್ಯ, ಶಾಹಬ್, ಕುಮಾರ್, ಝುಬೈರ್ ಮುಂತಾದವರು ಭಾಗವಹಿಸಿದ್ದರು.