ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ಪಟ್ಟಣದಲ್ಲಿ ಚರ್ಚ್ ಒಂದರ ಕಾಣಿಕೆ ಪೆಟ್ಟಿಗೆಯಿಂದ ಬೇಬಿ ಜೀಸಸ್ ಪ್ರತಿಮೆಗೆ ಹಾನಿಮಾಡಿ ಕಾಣಿಕೆ ಪೆಟ್ಟಿಗೆಯಿಂದ ಹಣ ದೋಚಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಗೋಣಿಕೊಪ್ಪಲು ರಸ್ತೆಯಲ್ಲಿರುವ ಸಂತ ಮೇರಿಯಮ್ಮ ಚರ್ಚ್ ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಚರ್ಚ್ ಒಳಗೆ ನುಗ್ಗಿ ಕ್ರಿಸ್ಮಸ್ ಹಬ್ಬದ ಆಚರಣೆಗಾಗಿ ಸ್ಥಾಪಿಸಲಾದ ಇನ್ಫೆಂಟ್ ಜೀಸಸ್ ವಿಗ್ರಹವನ್ನು ಧ್ವಂಸಗೊಳಿಸಿದರು.
ಬೆಳಗಿನ ಪ್ರಾರ್ಥನೆಯ ನಂತರ ಚರ್ಚ್ ಅನ್ನು ಮುಚ್ಚಿದಾಗ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಬಾಗಿಲನ್ನು ಮುರಿದಿದ್ದರು ಮತ್ತು ಕಾಣಿಕೆ ಪೆಟ್ಟಿಗೆಯಿಂದ ಹಣವನ್ನು ಸಹ ದೋಚಿದ್ದರು.
ಈ ಸಂಬಂಧ ಫಾದರ್ ಜಾನ್ ಪಾಲ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಹೆಚ್ಚಿನ ತನಿಖೆ ನಡೆಯುತ್ತಿದೆ.