News Karnataka Kannada
Monday, April 29 2024
ಮೈಸೂರು

ಮಾಧ್ಯಮ ಸಂವಾದದಲ್ಲಿ ಯದುವೀರ್‌-ಪ್ರತಾಪ್‌ ಮುಖಾಮುಖಿ

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಮಿಸ್‌ ಆದ ಬಳಿಕ ಪ್ರತಾಪ್‌ ಸಿಂಹ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯದುವೀರ್‌ ಅವರನ್ನು ಕೂಡ ಬೇಟಿ ಮಾಡಿರಲಿಲ್ಲ. ಇದೀಗ ಮೈಸೂರು ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಮಾಧ್ಯಮ ಸಂವಾದದಲ್ಲಿ ಹಾಲಿ ಸಂಸದ ಪ್ರತಾಪ್‌ ಸಿಂಹ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಮುಖಾಮುಕಿಯಾಗಿದ್ದು ಇಬ್ಬರೂ ಗೌರವದಿಂದಲೇ ನಡೆದುಕೊಂಡಿದ್ದಾರೆ.
Photo Credit : News Kannada

ಮೈಸೂರು: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಮಿಸ್‌ ಆದ ಬಳಿಕ ಪ್ರತಾಪ್‌ ಸಿಂಹ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯದುವೀರ್‌ ಅವರನ್ನು ಕೂಡ ಬೇಟಿ ಮಾಡಿರಲಿಲ್ಲ. ಇದೀಗ ಮೈಸೂರು ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಮಾಧ್ಯಮ ಸಂವಾದದಲ್ಲಿ ಹಾಲಿ ಸಂಸದ ಪ್ರತಾಪ್‌ ಸಿಂಹ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಮುಖಾಮುಕಿಯಾಗಿದ್ದು ಇಬ್ಬರೂ ಗೌರವದಿಂದಲೇ ನಡೆದುಕೊಂಡಿದ್ದಾರೆ.

ಮಾಧ್ಯಮ ಸಂವಾದದಲ್ಲಿ ಯದುವೀರ್‌ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ನನ್ನ ತಂದೆ ನಾಲ್ಕು ಬಾರಿ ಸಂಸದರಾಗಿದ್ದರು. ನಮಗೆ ಎಲ್ಲಾ ಪಕ್ಷದವರೊಂದಿಗೆ ಉತ್ತಮ ಒಡನಾಟ ಇದೆ ಎಂದರು.ಹಾಗೂ ಬಿಜೆಪಿಯೊಂದಿಗೆ ನನ್ನ ಉತ್ತಮ ಹೊಂದಾಣಿಕೆ ಇದೆ ಎಂದರು.

ಜನರಿಗೆ ಅರಮನೆ ಬಗ್ಗೆ ಭಾವನಾತ್ಮಕ ಸಂಬಂಧ ಇದೆ.ನಾನು ರಾಜ ಎಂದು ಹೇಳಿಕೊಂಡು ತಿರುಗುತ್ತಿಲ್ಲ. ಅರಮನೆಗೆ ಒಂದು ಪರಂಪರೆ ಇದೆ.ಅದನ್ನು ಹೊರತುಪಡಿಸಿದರೆ ನಾನು ಕೂಡ ಸಾಮಾನ್ಯನೆ ಎಂದು ಹೇಳಿದ್ದಾರೆ.

ಬಳಿಕ ಪ್ರತಾಪ್‌ ಸಿಂಹ ಮಾತನಾಡಿ, ಯದುವಿರ್‌ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ,ಇನ್ನು ರಾಜರಾಗಿ ಪರಿಚಯವಾಗಿದ್ದ ಅವರು ನಾಡಿನ ಜನತೆಗೆ ಅಭ್ಯರ್ಥಿಯಾಗಿ ಮನವರಿಕೆ ಮಾಡಿಕೊಡಬೇಕು. ಇದಕ್ಕೆ ಮಾಧ್ಯಮ ಮುಖ್ಯ ಎಂದರು.

ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಷದವರಿಗೂ ದ್ರೋಹ ಮಾಡಲ್ಲ.ನಾನು ಯದುವೀರ್‌ ಅಭ್ಯರ್ಥಿಯಾಗಿ ಆಯ್ಕೆ ಆಗುವ ಮುಂಚೆ ರಾಜನಿಗೆ ರಾಜಕಾರಣಿಯಾಗಿ ಕಾರ್ಯನಿರ್ವಹಿಸಲು ಆಗುತ್ತ ಎಂದು ಪ್ರಶ್ನೆ ಕೇಳಿದ್ದೆ ಅದಕ್ಕೆ ಯದುವೀರ್‌ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದರು

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು