ಮೈಸೂರು : ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮೈಸೂರು ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ದಿಸುವುದು ಖಚಿತವಾಗಿದೆ. ಅವರು ಸ್ಪರ್ದಿಸಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಾಪ ಸಿಂಹನವರು ಕಳೆದ 10 ವರ್ಷಗಳಿಂದ ಮೈಸೂರು,ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.
ಅಭಿವೃದ್ಧಿ ಕೆಲಸ ಕಾರ್ಯ ಇವರ ಅವಧಿಯಲ್ಲಿ ನಡೆದರು ಇವರ ಕೆಲವೊಂದು ನಡೆ ನುಡಿಯ ಬಗ್ಗೆ ಪಕ್ಷದ ಕೆಲವು ಮುಖಂಡರ ಕೆಂಗಣ್ಣಿಗೆ ಗುರಿಯಗ್ಗಿದ್ದರು. ಮೈಸೂರು, ಕೊಡಗಿನ ಪ್ರಭಾವಿ ಬಿಜೆಪಿ ಮುಖಂಡರುಗಳು ಈ ಬಾರಿ ಇವರ ಪರ ನಿಲ್ಲದೆ, ಬದಲಾವಣೆ ಬಗ್ಗೆ ಹೆಚ್ಚು ಒಲವು ತೋರಿಸಿದ್ದರು, ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಕರ್ತರು ಕೂಡ ಇವರ ಬಗ್ಗೆ ಒಲವು ಈ ಬಾರಿ ತೋರಿಲ್ಲ ಈ ಎಲ್ಲ ಬೆಳವಣಿಗೆ ಹಿನ್ನಲೆ ಹೈ ಕಮಾಂಡ್ ಅಭ್ಯರ್ಥಿಯ ಬದಲಾವಣೆಯನ್ನು ಮಾಡಿ ಯದುವೀರ್ ಒಡೆಯರಿಗೆ ಮಣೆ ಹಾಕಿದೆ ಎಂದು ಹೇಳಲಾಗುತ್ತಿದೆ.ಇಂದು ಅಥವಾ ನಾಳೆ ಬಿಜೆಪಿ ಇವರ ಸ್ಪರ್ಧೆಯ ಬಗ್ಗೆ ಖಚಿತ ಪಡಿಸಲಿದೆ.