News Karnataka Kannada
Monday, April 29 2024
ಮೈಸೂರು

ಅರಮನೆಯಿಂದ ಪ್ರಜಾ ಸೇವೆಗೆ “ಯದುವೀರ್ ಒಡೆಯರ್”

ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮೈಸೂರು ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ದಿಸುವುದು ಖಚಿತವಾಗಿದೆ
Photo Credit : News Kannada

 ಮೈಸೂರು : ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮೈಸೂರು ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ದಿಸುವುದು ಖಚಿತವಾಗಿದೆ. ಅವರು ಸ್ಪರ್ದಿಸಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಾಪ ಸಿಂಹನವರು ಕಳೆದ 10 ವರ್ಷಗಳಿಂದ ಮೈಸೂರು,ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.

ಅಭಿವೃದ್ಧಿ ಕೆಲಸ ಕಾರ್ಯ ಇವರ ಅವಧಿಯಲ್ಲಿ ನಡೆದರು ಇವರ ಕೆಲವೊಂದು ನಡೆ ನುಡಿಯ ಬಗ್ಗೆ ಪಕ್ಷದ ಕೆಲವು ಮುಖಂಡರ ಕೆಂಗಣ್ಣಿಗೆ ಗುರಿಯಗ್ಗಿದ್ದರು. ಮೈಸೂರು, ಕೊಡಗಿನ ಪ್ರಭಾವಿ ಬಿಜೆಪಿ ಮುಖಂಡರುಗಳು ಈ ಬಾರಿ ಇವರ ಪರ ನಿಲ್ಲದೆ, ಬದಲಾವಣೆ ಬಗ್ಗೆ ಹೆಚ್ಚು ಒಲವು ತೋರಿಸಿದ್ದರು, ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಕರ್ತರು ಕೂಡ ಇವರ ಬಗ್ಗೆ ಒಲವು ಈ ಬಾರಿ ತೋರಿಲ್ಲ ಈ ಎಲ್ಲ ಬೆಳವಣಿಗೆ ಹಿನ್ನಲೆ ಹೈ ಕಮಾಂಡ್ ಅಭ್ಯರ್ಥಿಯ ಬದಲಾವಣೆಯನ್ನು ಮಾಡಿ ಯದುವೀರ್ ಒಡೆಯರಿಗೆ ಮಣೆ ಹಾಕಿದೆ ಎಂದು ಹೇಳಲಾಗುತ್ತಿದೆ.ಇಂದು ಅಥವಾ ನಾಳೆ ಬಿಜೆಪಿ ಇವರ ಸ್ಪರ್ಧೆಯ ಬಗ್ಗೆ ಖಚಿತ ಪಡಿಸಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು