ಮಂಡ್ಯ: ಮಂಡ್ಯ ನಗರದ ಸ್ವರ್ಣ ಸಂದ್ರದಲ್ಲಿ ರೌಡಿಶೀಟರ್ ಒಬ್ಬಾತನನ್ನು ಬೀದಿಯಲ್ಲಿ ಮಧ್ಯ ರಾತ್ರಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಅಕ್ಷಯ್ (24) ಹತ್ಯೆಯಾದ ಯುವಕ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಅಕ್ಷಯ್ ನನ್ನು ಫೋನ್ ಮಾಡಿ ಕರೆಸಿಕೊಂಡು ನಡು ಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ.
ಹಲವು ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಅಕ್ಷಯ್ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು. ಈತನ ಜೊತೆಗೆ ಹಿಂದೆ ಇದ್ದ ಹಲವು ಸ್ನೇಹಿತರು ಇಂದು ಶತ್ರುಗಳಾಗಿದ್ದು, ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆಸಿರುವ ಸಾಧ್ಯತೆ ಇದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ತೊಡಗಿದ್ದಾರೆ.