ಮಂಡ್ಯ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಅಕ್ಟೋಬರ್ 16 ರಂದು ಮಂಡ್ಯ ಜಿಲ್ಲೆಯ ಕಾವೇರಿ ನದಿ ಮತ್ತು ಅದರ ಉಪನದಿಗಳ ದಡದಲ್ಲಿ ನಡೆಯಲಿರುವ ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ.
ಈ ಕುಂಭಮೇಳವು ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ ನಡೆಯಲಿದೆ. ಅಕ್ಟೋಬರ್ ೧೪ ರಂದು ಕುಂಭ ಮೇಳ ಪ್ರಾರಂಭವಾಗಲಿದೆ. ಇದು ಮೂರು ದಿನಗಳ ಆಚರಣೆಯಾಗಿರುತ್ತದೆ.
ಈ ಕುಂಭಮೇಳವನ್ನು ಆದಿಚುಂಚನಗಿರಿ ಮಠದ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಈ ಮಠವು ಸಹ ನಾಥ ಪಂಥಕ್ಕೆ ಸೇರಿರುವುದರಿಂದ, ಯೋಗಿಯನ್ನು ಆಹ್ವಾನಿಸಲಾಗಿದೆ. ಯೋಗಿ ಅವರ ಪ್ರಭಾವದಿಂದ ಈ ಒಕ್ಕಲಿಗರ ಹೃದಯಭಾಗದಲ್ಲಿ ಬಿಜೆಪಿ ರಾಜಕೀಯ ಲಾಭವನ್ನು ನಿರೀಕ್ಷಿಸುತ್ತಿದೆ.