News Karnataka Kannada
Friday, May 03 2024
ಮಂಡ್ಯ

ಹಲಗೂರು: ಕಾರು ಪಲ್ಟಿಯಾಗಿ ಸ್ಥಳದಲ್ಲೇ ಮಹಿಳೆ ಸಾವು, ಮಗು ಸೇರಿ 8 ಮಂದಿಗೆ ಗಂಭೀರ ಗಾಯ

ಚಿತ್ರದುರ್ಗದ ತಿರುಮಲ ಡಾಬಾ ಬಳಿ ಕಾರು-ಲಾರಿ ಮಧ್ಯೆ ಅಪಘಾತ ಸಂಭವಿಸಿ ಕೃಷಿ ಇಲಾಖೆ ನೌಕರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
Photo Credit :

ಹಲಗೂರು (ಮಂಡ್ಯ) : ಹಲಗೂರು ಸಮೀಪದ ಲಂಬಾಣಿ ಹೊಸದೊಡ್ಡಿ ಹಾಗೂ ಕೃಷ್ಣೇಗೌಡನ ದೊಡ್ಡಿ ಮಾರ್ಗಮಧ್ಯೆ ಮುತ್ತತ್ತಿ ಬಳಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.

ಸಮೀಪದ ಮುತ್ತತ್ತಿಯಲ್ಲಿ ಬೀಗರ ಔತಣಕೂಟ ಮುಗಿಸಿ ಹಿಂದಿರುಗುವಾಗ ಲಂಬಾಣಿ ಹೊಸ ದೊಡ್ಡಿ ಮತ್ತು ಕೃಷ್ಣೇಗೌಡನ ದೊಡ್ಡಿಯ ಮಾರ್ಗ ಮಧ್ಯೆ ಕಾರಿನ ಹಿಂಭಾಗದ ಚಕ್ರ ಸ್ಫೋಟಗೊಂಡ ಕಾರಣ ಈ ಘಟನೆ ಸಂಭವಿಸಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ಸಾತನೂರು ಹೋಬಳಿಯ ಕಬ್ಬಾಳು ಗ್ರಾಮದ ವೀರಭದ್ರ ಗೌಡರ ಪತ್ನಿ ನಾಗಮ್ಮ (45 ವ) ಎಂಬುವವರು ಮೃತ ಪಟ್ಟ ದುರ್ದೈವಿ.

ಕಾರಿನಲ್ಲಿದ್ದ ಕನಕಪುರ ತಾಲ್ಲೂಕು ಮಲ್ಲಪುರ ಗ್ರಾಮದ ಕುಮಾರ್ (27), ಸುಮಿತ್ರ (37), ಸುಜಾತ (30), ಪುಷ್ಪ (25), ಪೂಜಾ (18), ಕೆಂಪಮ್ಮ (47) ಇಬ್ಬರು ಮಕ್ಕಳು ನಕ್ಷತ್ರ (02), ಆಯುಷ್ (04) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು