ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ವ್ಯಕ್ತಿಯೊಬ್ಬರು ಮಂಡ್ಯದಲ್ಲಿ ಅಸಜಹವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಮಂಡ್ಯದ ಪೊಲೀಸರು ವಿಜಯಪುರದ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೃತನ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಮೃತನ ಕುಟುಂಬದವರು ಮಂಡ್ಯಕ್ಕೆ ತೆರಳಿದ್ದು, ಮಂಡ್ಯ ಪೊಲೀಸ್ ಠಾಣೆಯಲ್ಲೇ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.
ಗದ್ದೆಪ್ಪ ಶಿವಬಸಪ್ಪ ಕೊಳ್ಳಿ (50) ಸಾವನ್ನಪ್ಪಿರುವ ವ್ಯಕ್ತಿ. ಈತ 2-3 ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಗುಳೇ ಹೋಗಿದ್ದ ಎನ್ನಲಾಗಿದೆ.