ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ.
ಸೋಮವಾರ ಸಂಜೆಯ ವೇಳೆಗೆ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 120.46 ಅಡಿಗೆ ತಲುಪಿತ್ತು.
ಜಲಾಶಯದ ಭರ್ತಿಗೆ ಕೇವಲ 4.34 ಅಡಿಯಷ್ಟೇ ಬಾಕಿ ಉಳಿದಿದೆ. ಸದ್ಯ 19,740 ಕ್ಯುಸೆಕ್ ಒಳಹರಿವು ಇದ್ದು, 5,496 ಹೊರಹರಿವು ಇತ್ತು. ಕಳೆದೊಂದು ವಾರದಲ್ಲಿ ಜಲಾಶಯಕ್ಕೆ 5 ಅಡಿ ನೀರು ಹರಿದುಬಂದಿದೆ.