News Karnataka Kannada
Sunday, April 28 2024
ಮೈಸೂರು

ಮಾಜಿ ಸಿಎಂ ಕುಮಾರಸ್ವಾಮಿ ಹಗುರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದೆ ಸುಮಲತ

Sumalatha Mandya 5 7 21
Photo Credit :

ಬೆಂಗಳೂರು: ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯೇ, ಮಾಧ್ಯಮಗಳ ಮುಂದೆ ಹೇಗೆ ಮಾತನಾಡಬೇಕು ಎಂದು ಮಾಜಿ ಸಿಎಂ ಆದವರಿಗೆ ಕನಿಷ್ಠ ಜ್ಞಾನ ಬೇಡ್ವಾ? ನಾನು ಯಾವತ್ತೂ ಇಂತ ಮಾತುಗಳಿಗೆ ತಲೆಕೆಡಿಸಿಕೊಂಡಿಲ್ಲ, ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಹೀಗಂತ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಎಚ್‌ಡಿಕೆ ಅವರ ಮಾತುಗಳಿಂದ ಅವರ ಸಂಸ್ಕಾರ ಗೊತ್ತಾಗ್ತಿದೆ. ಅವರ ವ್ಯಕ್ತಿತ್ವ ಎಂತದ್ದು ಅನ್ನುವುದನ್ನು ಬಿಚ್ಚಿಟ್ಟುಕೊಳ್ತಿದ್ದಾರೆ. ಕೆಆರ್ ಎಸ್ ಬಗ್ಗೆ ನಾನು ಕಾಳಜಿ ವಹಿಸ್ತಿದ್ದೇನೆ, ಇವರಿಗೆ ಯಾಕೆ ಸಮಸ್ಯೆ ಆಗ್ತಿದೆ. ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಲ್ಲ ಗೊತ್ತು ಎಂದು ಕುಮಾರಸ್ವಾಮಿ ವಿರುದ್ಧ ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್ ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ವಿಚಾರವನ್ನು ಅಲ್ಲಿನ ರೈತರು ನನ್ನ ಮುಂದೆ ಹೇಳಿದ್ದಾರೆ. ನಾನು ಕೆಅರ್ ಎಸ್ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದೇನೆ. ಅಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದೇನೆ. ಮುರುಗೇಶ್ ನಿರಾಣಿಯವರಿಗೆ ಅದನ್ನು ತೋರಿಸಿದ್ದೇನೆ. ಅಕ್ರಮ ಗಣಿಗಾರಿಕೆ ಬಗ್ಗೆ ಎಕ್ಸ್ ಫೋಸ್ ಮಾಡಿದ್ದೇನೆ. ಇದಕ್ಕೆ ಬ್ರೇಕ್ ಹಾಕಿದರೆ ಸಾವಿರಾರು ಕೋಟಿ ಸರ್ಕಾರಕ್ಕೆ ಆದಾಯ ಬರುತ್ತೆ. ಈ ಆದಾಯ ಸರ್ಕಾರಕ್ಕೆ ತಾನೇ ಬರೋದು, ಈಗ ಯಾಕೆ ಮುತುವರ್ಜಿ ವಹಿಸಿ ಬರ್ತಾರೋ ಗೊತ್ತಿಲ್ಲ ಎಂದು ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು. ಮೈಶುಗರ್ ಖಾಸಗಿಯವರಿಗೆ ಕೊಡಲು ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ನಾನು ಒತ್ತಾಯಿಸಿದ್ದೆ. ರೈತರ ಕಾಳಜಿ‌ ಬಗ್ಗೆ ನಾನು ಒತ್ತಾಯಿಸಿದ್ದೆ, ಈಗ ಆರೋಪವನ್ನ ಅವರು ಮಾಡ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾತನಾಡಲಿಲ್ಲ. 400 ಕೋಟಿಯಷ್ಟು ಭ್ರಷ್ಟಾಚಾರ ಅಲ್ಲಿ ಆಗಿದೆ, ಇದರ ಬಗ್ಗೆ ಯಾಕೆ ಅವರು ಮಾತನಾಡಲ್ಲ ಎಂದು ಪ್ರಶ್ನಿಸಿದರು. ಕಾರ್ಖಾನೆಯನ್ನ ಓಪನ್ ಮಾಡಿ ಎಂದಿದ್ದೇನೆ. ಯಾವುದೇ ರೀತಿಯಲ್ಲಾದರು ತೆರೆಯಲಿ ಆ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಆದರೆ ಪ್ರಾರಂಭಕ್ಕೆ ನಾನು ಒತ್ತಾಯ ಮಾಡುತ್ತಲೇ ಇದ್ದೇನೆ ಹೊರತು ಖಾಸಗಿಕರಣ ಆಗಬೇಕೆಂದು ಹೇಳಿಲ್ಲ ಎಂದು ಹೆಚ್ಡಿಕೆಗೆ ಸುಮಲತಾ ಟಾಂಗ್ ನೀಡಿದರು.
ಮೈಶುಗರ್ ಅಧಿಕಾರಿಗಳು ಕಾರ್ಖಾನೆಯನ್ನು ಸರ್ಕಾರ ನಡೆಸುವುದು ಕಷ್ಟ ಎಂದಿದ್ದಾರೆ. ನಾನು ಖಾಸಗಿಯವರಿಗೆ ಕೊಡಿ ಎಂದು ಒತ್ತಾಯಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಮುಂದಿನ ಸಂಸದರು ಯಾರು ಆಗಬೇಕು ಎಂಬುವುದನ್ನು ಜನ ನಿರ್ಧಾರ ಮಾಡುತ್ತಾರೆ. ಜನ ಯಾರನ್ನು ಆರಿಸಿಕಳಿಸಿದ್ರು ಅನ್ನೋದು ಅರ್ಥವಾಗಿಲ್ಲ ಎಂದು ಟಾಂಗ್ ಕೊಟ್ಟರು. ಮಂಡ್ಯ ಜಿಲ್ಲೆಗೆ ಅಂತಹ ಸಂಸದರು ಹಿಂದೆಯೂ ಬಂದಿಲ್ಲ, ಮುಂದೆಯೂ ಬರೋದಿಲ್ಲ! ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕಿಡಿಕಾರಿದ್ದರು. ಕೆಆರ್ ಎಸ್ ನ ಏನೋ ಇವರೇ ರಕ್ಷಣೆ ಮಾಡ್ತಾರಂತಲ್ಲ,ಬಹುಶಃ ಇವರನ್ನೇ ಕೆಆರ್‌ಎಸ್‌ ಡ್ಯಾಮ್ ಬಾಗಿಲಿಗೆ ನೀರು ಹೋಗದ ರೀತಿ ಬಾಗಿಲಿಗೆ ಇವರನ್ನೇ ಮಲಗಿಸಿಬಿಟ್ರೆ ಕಾರ್ಖಾನೆ ಬಿಗಿಯಾಗಿಬಿಡುತ್ತದೆ ಎಂದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು