News Karnataka Kannada
Tuesday, May 07 2024
ಮಂಡ್ಯ

ಓಂ ಶಕ್ತಿ ಯಾತ್ರೆಯಿಂದ ವಾಪಸ್ ಆದ 119 ಜನರಲ್ಲಿ ಕೊರೊನಾ ಸೋಂಕು ದೃಢ

Corona
Photo Credit :

ಮಂಡ್ಯ :  ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಓಂ ಶಕ್ತಿ ಯಾತ್ರೆಯಿಂದ ವಾಪಸ್ ಆದವರಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಓಂ ಶಕ್ತಿ ಯಾತ್ರೆಯಿಂದ ವಾಪಸ್ ಆದ 119 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಯಾತ್ರೆ ಮುಗಿಸಿ ಬಂದ ಪೋಷಕರ ಸಂಪರ್ಕದಲ್ಲಿದ್ದ ಮಕ್ಕಳಿಗೂ ಸೋಂಕು ಹರಡಿದ್ದು, ಮೂರು ಮಕ್ಕಳಿಗೆ ಪಾಸಿಟಿವ್ ಬಂದಿದೆ.

ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಿ ಮಂಡ್ಯ ಜಿಲ್ಲೆಗೆ ವಾಪಸ್ ಆಗಿದ್ದ 89 ಜನರಲ್ಲಿ ನಿನ್ನೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇಂದು ಮತ್ತೆ 30 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಓಂ ಶಕ್ತಿಯಿಂದ ವಾಪಸ್ ಆದ ಎಲ್ಲಾ ಯಾತ್ರಾರ್ಥಿಗಳನ್ನು ಮಳವಳ್ಳಿ ಕೆ ಎಸ್ ಆರ್ ಟಿ ಸಿ ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ನೆಗೆಟಿವ್ ಬಂದವರಿಗೂ 7 ದಿನಗಳ ಕಡ್ಡಾಯ ಕ್ವಾರ‍ಂಟೈನ್ ಗೆ ಜಿಲ್ಲಾಡಳಿತ ಸೂಚಿಸಿದೆ.

ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ಓಂ ಶಕ್ತಿ ದೇವಸ್ಥಾನದಿಂದ ಆಗಮಿಸಿದ 6 ಯಾತ್ರಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್ ಭೀತಿ ಎದುರಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು