ಕೊಡಗು: ಮಳೆ ಇಲ್ಲದೆ ಜನ ಸಂಕಷ್ಟಕ್ಕೆ ಈಡಾಗಿರುವ ಸಂದರ್ಭದಲ್ಲಿ ಮಡಿಕೇರಿಯ ಉಳ್ಳಿಯಡ ಡಾಟಿ ಪೂವಯ್ಯ ಅವರ ನೇತೃತ್ವದಲ್ಲಿ ಇಂದು ವಿಶೇಷ ಕಾಲ್ನಡಿಗೆ ಸೇವೆ ನಡೆದಿದೆ.
ಕೊಡಗಿನ ನಾಲ್ಕು ದಿಕ್ಕುಗಳಿಂದ ಆಗಮಿಸಿದ ಹತ್ತರಿಂದ ಹದಿನೈದು ಹೆಂಗಳೆಯರು ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಕಕ್ಕಬೆಯ ಪಟ್ಟಣದ ಸ್ವಾಗತ ಕಮಾನಿನಿಂದ ಪಾಡಿ ಇಗ್ಗುತ್ತಪ್ಪ ದೇವಾಲಯದವರೆಗೆ 2 ಕೆಜಿ ಅಕ್ಕಿ, ಒಂದು ಕೆಜಿ ಬೆಲ್ಲ, ಒಂದು ತೆಂಗಿನ ಕಾಯಿಯನ್ನು ಶುದ್ಧವಾದ ಬಿಳಿ ಬಟ್ಟೆಯಲ್ಲಿ ಕಟ್ಟಿ ಅದನ್ನು ತಲೆಯ ಮೇಲಿಟ್ಟು ಚಪ್ಪಲಿ ಧರಿಸದೆ ಕಾಲ್ನಡಿಗೆಯಲ್ಲಿ ದೇವರನ್ನು ಧ್ಯಾನಿಸುತ ಪಾದಯಾತ್ರೆ ನಡೆಸಿ ದೇವಾಲಯದಲ್ಲಿ ದೇವರಿಗೆ ಅಡ್ಡ ಬಿದ್ದು ನಮಸ್ಕರಿಸಿ ಮಳೆಗಾಗಿ ಭಕ್ತಿ ಪೂರ್ವಕವಾಗಿ ಪೂಜೆ ನೆರವೇರಿಸಿದ್ದಾರೆ.
ಈ ವಿಶೇಷ ಕಾರ್ಯಕ್ರಮಕ್ಕೆ ಡಾಟಿ ಪೂವಯ್ಯನವರೊಂದಿಗೆ ವಿರಾಜಪೇಟೆಯ ಮನೆಯಪಂಡ ಕಾಂತಿ ಸತೀಶ್ ಕೈಜೋಡಿಸಿದ್ದರು.
ಪೂಜೆ ನೆರವೇರಿಸಿ ಹೆಂಗೆಳೆಯರು ದೇವಾಲಯದಿಂದ ಹಿಂದಿರುಗುವ ಸಂದರ್ಭ
ಮಧ್ಯಾಹ್ನದ ನಂತರ ಇಡೀ ಜಿಲ್ಲೆಯಲ್ಲಿ ಬಹುತೇಕ ಕಡೆ ಮಳೆಯಾಗಿದೆ. ಇವರ ಭಕ್ತಿಯ ಪೂಜೆಗೆ ಮೆಚ್ಚಿ ವರುಣನ ಕೃಪೆಯಾಗಿರಬಹುದು ಎಂದು ಊಹಿಸಲಾಗಿದೆ.