ಮಡಿಕೇರಿ: ರಾಜ್ಯದಲ್ಲಿ ಬಿಜೆಪಿ ಮತ್ತು ಜಾತ್ಯಾತೀತ ಜನತಾ ದಳ ಮೈತ್ರಿಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಸಂದರ್ಭದಲ್ಲಿ ಎರಡು ಪಕ್ಷದ ಮೈತ್ರಿ ಸಭೆ ಮಡಿಕೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಜಂಟಿಯಾಗಿ ಎದುರುಸುವ ತೀರ್ಮಾನ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಚರ್ಚೆ ನಡೆಯಿತು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಜಾತ್ಯಾತೀತ ಜನತಾ ದಳದ ಕೋರ್ ಕಮಿಟಿ ಸದಸ್ಯರಾದ ಟಿ.ಎಲ್.ವಿಶ್ವ ಮತ್ತು ಪ್ರವೀಣ್, ಬಿಜೆಪಿ ಜಿಲ್ಲಾ ಪ್ರಧಾನ
ಕಾರ್ಯದರ್ಶಿಗಳಾದ ಮಹೇಶ್ ಜೈನಿ , ವಿ.ಕೆ ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಎರಡು ಪಕ್ಷದ ಪ್ರಮುಖರಾದ ಪಾಣ್ ತಲೆ ವಿಶ್ವ ನಾಥ್, ನಾಗರಾಜ್, ಅನಿತಾ ಪೂವಯ್ಯ ಕನ್ನಿಕೆ, ಮನು ಮಂಜುನಾಥ್, ಪುಷ್ಪವತಿ, ಗೌತಮ್ , ಕವನ್ ಕಾವೇರಪ್ಪ ,ಮಂಜುನಾಥ್, ಶಿವದಾಸ್ ,ಜಾಶಿರ್ , ಸುರೇಶ್, ರವಿ ಮೊಗೇರ ಸೇರಿದಂತೆ ಎರಡು ಪಕ್ಷದ ಪ್ರಮುಖರು ಹಾಜರಿದ್ದರು