ವಿರಾಜಪೇಟೆ: ವಿರಾಜಪೇಟೆ ತಾಲೂಕು ಅಮ್ಮತ್ತಿಯಲ್ಲಿ ಅಂಗಡಿ ವರ್ತಕನಿಗೆ ಗುಂಡು ಹೊಡೆದ ಘಟನೆ ನಡೆದಿದೆ.
ನೆಲ್ಲಮಕ್ಕಡ ರಂಜಿತ್ ಎಂಬಾತ ಗುಂಡೇಟು ಹಾರಿಸಿದ್ದು, ವರ್ತಕ ಬೋಪಣ್ಣ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ವರ್ತಕ ಬೋಪಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಸಾರ್ವಜನಿಕರಿಗೆ ಗುಂಡು ಹಾರಿಸಿದ ಆರೋಪ ರಂಜಿತ್ ಮೇಲಿದೆ ಎಂದು ತಿಳಿದು ಬಂದಿದೆ. ಗುಂಡು ಹಾರಿಸಿದ ವೇಳೆ ಆರೋಪಿ ರಂಜಿತ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಮ್ಮತ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ರಂಜಿತ್ ಇರುವ ಆಸ್ಪತ್ರೆಯಲ್ಲೇ ಪೊಲೀಸರು ಬೀಡುಬಿಟ್ಟಿದ್ದು, ಸ್ಥಳಕ್ಕೆ ಎಸ್.ಪಿ ರಾಮ್ರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿದ್ದಾಪುರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.