ಮಡಿಕೇರಿ: ಚಿಕ್ಕಮಗಳೂರು, ಬೀದರ್ ನಂತರ ಇದೀಗ ಕೊಡಗಿನ ಮೇಲೆ ವರುನದೇವನ ದೃಷ್ಟಿ ಹರಿದಿದ್ದು, ತಾಲೂಕಿನ ಕುಜಿಲಗೇರಿ, ಬೊಳ್ಳುಮಾಡು ಹಾಗೂ ವಿರಾಜಪೇಟೆ ತಾಲೂಕಿನ ಕರಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಸುರಿದ ಮಳೆ ಕಾಫಿ ಬೆಳೆಗಾರರ ಮುಖದಲ್ಲಿ ಮುಗುಳ್ನಗೆ ಮೂಡಿಸಿದರೆ, ಅತ್ತ ಅಕಾಲಿಕ ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.