News Karnataka Kannada
Sunday, April 28 2024
ಮಡಿಕೇರಿ

ಪೊನ್ನಂಪೇಟೆ: ವೃತ್ತಾಕಾರದ ಕಟ್ಟೆ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ

Public demands removal of circular embankment
Photo Credit : By Author

ಪೊನ್ನಂಪೇಟೆ: ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಕಳೆದ ಎರಡು ದಶಕಗಳ ಹಿಂದೆ ಸಂಸ್ಥೆಯೊಂದು ವೃತ್ತಾಕಾರದ ಕಟ್ಟೆಯನ್ನು ಕಟ್ಟಿ ಸೂಚನಾ ಫಲಕವನ್ನು ಅಳವಡಿಸಿತ್ತು. ಇದೀಗ ಸೂಚನಾ ಫಲಕ ಹಾಗೂ ಅಲ್ಲಿ ಅಳವಡಿಸಿದ್ದ ವಿದ್ಯುತ್ ದೀಪವು ಕೂಡ ದುರಸ್ತಿಗೀಡಾಗಿವೆ.

ಈ ವೃತ್ತಾಕಾರದ ಕಟ್ಟೆ ಇದೀಗ ವಾಹನ ಸಂಚಾರಕ್ಕೆ ಅಡೆಚೆನೆಯನ್ನು ಉಂಟು ಮಾಡುತ್ತಿದೆ. ಬಸ್ ನಿಲ್ದಾಣದಿಂದ ಬಂದು ಈ ದೇವಸ್ಥಾನ ಸುತ್ತು ಬರುವಾಗ ವಾಹನಗಳ ಒಂದು ಭಾಗ ಈ ಕಟ್ಟೆಗೆ ತಗುಲಿ ವಾಹನಕ್ಕೆ ಹಾನಿ ಉಂಟಾಗುತ್ತಿದೆ. ಒಂದು ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ಸುತ್ತು ಬರುವ ವಾಹನಗಳಿಗೆ ನೇರವಾಗಿ ಹೋಗಲು ಸಾಧ್ಯವಿಲ್ಲದೆ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ಎದುರಾಗುತ್ತಿದೆ.ಈ ಕಟ್ಟೆಗೆ ಸವರಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವೃತ್ತಾಕಾರದ ಕಟ್ಟೆಯಿಂದ ಯಾವುದೇ ಉಪಯೋಗವಿಲ್ಲದರಿಂದ ಕೂಡಲೇ ಗ್ರಾಮ ಪಂಚಾಯಿತಿ ಇದನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು