ಪೊನ್ನಂಪೇಟೆ: ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಕಳೆದ ಎರಡು ದಶಕಗಳ ಹಿಂದೆ ಸಂಸ್ಥೆಯೊಂದು ವೃತ್ತಾಕಾರದ ಕಟ್ಟೆಯನ್ನು ಕಟ್ಟಿ ಸೂಚನಾ ಫಲಕವನ್ನು ಅಳವಡಿಸಿತ್ತು. ಇದೀಗ ಸೂಚನಾ ಫಲಕ ಹಾಗೂ ಅಲ್ಲಿ ಅಳವಡಿಸಿದ್ದ ವಿದ್ಯುತ್ ದೀಪವು ಕೂಡ ದುರಸ್ತಿಗೀಡಾಗಿವೆ.
ಈ ವೃತ್ತಾಕಾರದ ಕಟ್ಟೆ ಇದೀಗ ವಾಹನ ಸಂಚಾರಕ್ಕೆ ಅಡೆಚೆನೆಯನ್ನು ಉಂಟು ಮಾಡುತ್ತಿದೆ. ಬಸ್ ನಿಲ್ದಾಣದಿಂದ ಬಂದು ಈ ದೇವಸ್ಥಾನ ಸುತ್ತು ಬರುವಾಗ ವಾಹನಗಳ ಒಂದು ಭಾಗ ಈ ಕಟ್ಟೆಗೆ ತಗುಲಿ ವಾಹನಕ್ಕೆ ಹಾನಿ ಉಂಟಾಗುತ್ತಿದೆ. ಒಂದು ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ಸುತ್ತು ಬರುವ ವಾಹನಗಳಿಗೆ ನೇರವಾಗಿ ಹೋಗಲು ಸಾಧ್ಯವಿಲ್ಲದೆ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ಎದುರಾಗುತ್ತಿದೆ.ಈ ಕಟ್ಟೆಗೆ ಸವರಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವೃತ್ತಾಕಾರದ ಕಟ್ಟೆಯಿಂದ ಯಾವುದೇ ಉಪಯೋಗವಿಲ್ಲದರಿಂದ ಕೂಡಲೇ ಗ್ರಾಮ ಪಂಚಾಯಿತಿ ಇದನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.