ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಡಿಕೇರಿ ತಾಲ್ಲೂಕಿನ ಮೇಕೇರಿ ಭಾಗದಲ್ಲೂ ಅಪಾರ ಹಾನಿಯುಂಟಾಗಿದೆ. ಗ್ರಾಮದ ನಿವಾಸಿ ಕೃಷ್ಣಪ್ಪ ಎಂಬುವವರ ಮನೆಯ ಹಿಂಭಾಗದ ತಡೆಗೋಡೆ ಸಂಪೂರ್ಣ ಕುಸಿದು ನಷ್ಟ ಉಂಟಾಗಿದೆ.
ಸ್ಥಳಕ್ಕೆ ಮೇಕೇರಿ ಗ್ರಾ.ಪಂ ಅಧ್ಯಕ್ಷ ಬಿ.ಬಿ.ದಿನೇಶ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಕೃಷ್ಣಪ್ಪ ಅವರಿಗೆ ಆರ್ಥಿಕ ನೆರವು ನೀಡಿದರು.
ವಾರ್ಡ್ ಸದಸ್ಯ ಎಂ.ಯು.ಹನೀಫ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್, ಸಂಪಾಜೆ ಹೋಬಳಿಯ ಕಂದಾಯ ಪರಿವೀಕ್ಷಕ ವೆಂಕಟೇಶ್, ಪ್ರಮುಖರಾದ ಪ್ರಸಾದ್ ಬಿಳಿಗೇರಿ ಹಾಗೂ ಶ್ರೇಯಸ್ ಹಾಜರಿದ್ದರು.