ಮಡಿಕೇರಿ: ವಿರಾಜಪೇಟೆಯ ಅಮ್ಮತ್ತಿ ರಸ್ತೆಯ ಮುತ್ತಪ್ಪ ದೇವಾಲಯದ ಬಳಿ ಇರುವ ಬಸ್ ನಿಲ್ದಾಣದ ಬಳಿ ಜುಲೈ 3ರಂದು
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಅಮ್ಮತ್ತಿ ನಿವಾಸಿ ಎನ್.ಎ ಪೊನ್ನಣ್ಣ(46) ಹಾಗೂ ವಿರಾಜಪೇಟೆ ಸುಂಕದಕಟ್ಟೆ ನಿವಾಸಿ ಹೆಚ್.ಆರ್ ಲೋಹಿತ್ (26) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 104 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ವಿರಾಜಪೇಟೆಯ ಡಿವೈಎಸ್ಪಿ ಮೋಹನ್ ಕುಮಾರ್ ,ಸಿಪಿಐ ಬಿ.ಎಸ್ ಶಿವರುದ್ರಪ್ಪ , ಪಿ.ಎಸ್.ಐ ಮಂಜುನಾಥ್ ವಿರಾಜಪೇಟೆ ಗ್ರಾಮಾಂತರ ಠಾಣೆ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಸಲಾಯಿತು.
ವಿರಾಜಪೇಟೆ ಭಾಗದಲ್ಲಿ ಅಕ್ರಮ ದಂಧೆಗಳು, ಹೆಚ್ಚಾಗಿ ನಡೆಯುತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಇದೀಗ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿದೆ.