News Karnataka Kannada
Friday, May 10 2024
ಮಡಿಕೇರಿ

ಮಡಿಕೇರಿ: ಭೂಮಿ ಕಂಪಿಸಿದ ಜಿಲ್ಲೆಗೆ ಹಿರಿಯ ಭೂವಿಜ್ಞಾನಿಗಳು ಭೇಟಿ ನೀಡಬೇಕೆಂದು ಒತ್ತಾಯ

Senior geologists urged to visit the earthquake-hit district
Photo Credit : By Author

ಮಡಿಕೇರಿ ಜೂ.28: ಕೇವಲ ಒಂದೇ ವಾರದಲ್ಲಿ ಕೊಡಗಿನ ವಿವಿಧೆಡೆ ಮೂರು ಬಾರಿ ಭೂಮಿ ಕಂಪಿಸಿದ್ದು, ಹಿರಿಯ ಭೂವಿಜ್ಞಾನಿಗಳು ಜಿಲ್ಲೆಗೆ ಭೇಟಿ ನೀಡಿ ನೈಜಾಂಶ ಬಹಿರಂಗ ಪಡಿಸಬೇಕು ಮತ್ತು ಆತಂಕದಲ್ಲಿರುವ ಜನರಿಗೆ ಅಭಯ ನೀಡಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ನಿರಂತರ ಭೂಕಂಪನದಿಂದ ಕೊಡಗು ಜಿಲ್ಲೆಯ ಜನ ಭಯಗೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಅಪಾಯವಿಲ್ಲ, ಧೈರ್ಯದಿಂದಿರಿ ಎಂದು ಸಮಜಾಯಿಷಿಕೆ ನೀಡುತ್ತಿದ್ದಾರೆ. ಜನರಲ್ಲಿ ಅಡಗಿರುವ ಆತಂಕ ದೂರ ಮಾಡಬೇಕಾದರೆ ಭೂಕಂಪನದ ಸ್ಥಳಗಳಿಗೆ ಹಿರಿಯ ಭೂವಿಜ್ಞಾನಿಗಳು ಭೇಟಿ ನೀಡಿ ವೈಜ್ಞಾನಿಕ ಕಾರಣಗಳನ್ನು ಬಹಿರಂಗ ಪಡಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.
ಭೂಕಂಪನದ ಕೇಂದ್ರ ಬಿಂದು ಕೊಡಗು ಎಂದು ತಿಳಿದು ಬಂದಿದ್ದು, ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ. ಸತತ ಮೂರು ಬಾರಿ ಭೂಮಿ ಕಂಪಿಸಿರುವುದರಿAದ ಭಾರೀ ಮಳೆಯಾಗುವ ಸಂದರ್ಭ 2018 ರಂತೆ ಅನಾಹುತ ಸಂಭವಿಸುವ ಸಾಧ್ಯತೆಗಳಿದೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಸೂಕ್ಷö್ಮ ಪ್ರದೇಶಗಳ ಮೇಲೆ ನಿಗಾ ವಹಿಸಿ ಭೂವಿಜ್ಞಾನಿಗಳ ಸಲಹೆ ಪಡೆದು ಜನರನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು