ಮಡಿಕೇರಿ: ಕಂದಾಯ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಕಡತಗಳ ವಿಲೇವಾರಿ ಸುಲಭವಾಗಿ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಟಿಸಿ ಶುಲ್ಕವನ್ನು ರೂ.15 ರಿಂದ ರೂ.25ಕ್ಕೆ ಏರಿಕೆ ಮಾಡಿರುವುದು ಖಂಡನೀಯ ಎಂದ ಅವರು, ಈ ದರವನ್ನು ಕಡಿಮೆ ಮಾಡಿ ರೂ.15 ಕ್ಕೆ ಸೀಮಿತಗೊಳಿಸಬೇಕು ಎಂದರು.
ಜಿಲ್ಲಾ ಪಂಚಾಯ್ತಿ 29 ಕ್ಷೇತ್ರಗಳನ್ನು 25 ಸೀಮಿತಗೊಳಿಸಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ ಎಂದು ಆರೋಪಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ವಿ.ಪಿ.ಶಶಿಧರ್ ಕೆ.ಪಿ.ಚಂದ್ರಕಲಾ, ಹೆಚ್.ಎ.ಹಂಸ, ಪ್ರತ್ಯು, ಅಪ್ರೋಜ್ ಹಾಜರಿದ್ದರು.